ರಾಂಚಿಯ ಹಿನೂ ನಿವಾಸಿಯಾಗಿರುವ ಕ್ಷಿತಿಜ್ ವರ್ಮಾ ತಮ್ಮ ಮೂರನೇ ಪ್ರಯತ್ನದಲ್ಲಿ ಅಖಿಲ ಭಾರತ ಮಟ್ಟದಲ್ಲಿ 366ನೇ ರ್ಯಾಂಕ್ ಪಡೆದವರು. ಅಧ್ಯಯನದ ಸಮಯದಲ್ಲಿ ಗಮನ ಹರಿಸಲು ಮತ್ತು ಮಾನಸಿಕ ಒತ್ತಡವನ್ನು ನಿಭಾಯಿಸಲು ಅವರು ಪ್ರತಿದಿನ 30 ನಿಮಿಷಗಳ ಧ್ಯಾನವನ್ನು ಅಳವಡಿಸಿಕೊಂಡಿದ್ದರಂತೆ. ತಾನು ಎದುರಿಸಿದ ವೈಫಲ್ಯಗಳನ್ನು ಆತ್ಮಪರಿಶೀಲನೆಗೆ ಉಪಯೋಗಿಸಿಕೊಂಡು, ತಾನೇನು ತಪ್ಪು ಮಾಡುತ್ತಿದ್ದೆ ಎಂಬುದನ್ನು ವಿಶ್ಲೇಷಿಸಿ ನಂತರದ ಪ್ರಯತ್ನಗಳಲ್ಲಿ ಸಾಧಿಸಿ ತೋರಿಸಿದ್ದಾರೆ ಕ್ಷಿತಿಜ್.
ಭಾರತೀಯ ವಿದೇಶಾಂಗ ಸೇವೆಯಲ್ಲಿ AIR 1 ಪಡೆದ ಕನಿಕಾ, ಮೊದಲ ಎರಡು ಪ್ರಯತ್ನಗಳಲ್ಲಿ ಅನುತ್ತೀರ್ಣರಾಗಿದ್ದರು.. “ನಾನು ಎಂದಿಗೂ IFS ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುತ್ತೇನೆಂದು ಊಹಿಸಿರಲಿಲ್ಲ”. ದಿನಕ್ಕೆ 12 ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದೆ. ಪಾರ್ಟಿಗಳು ಮತ್ತು ಮದುವೆಗಳು ಸೇರಿದಂತೆ ಸಾಮಾಜಿಕ ಜೀವನವನ್ನು ಸಂಪೂರ್ಣವಾಗಿ ತ್ಯಜಿಸಿದ್ದೆ.
ನನ್ನ ಪ್ರಪಂಚ ಕೇವಲ ನನ್ನ ಟೇಬಲ್ ಲ್ಯಾಂಪ್ ಹಾಗೂ ನನ್ನ ಅಧ್ಯಯನ ಇವಿಷ್ಟೇ ಆಗಿತ್ತು. “ನೂರಾರು ಪುಸ್ತಕಗಳನ್ನು ಓದುವ ಬದಲು ನಿಮಗೆ ಸಂಪೂರ್ಣವಾಗುವ ಪುಸ್ತಕವನ್ನು ಆರಿಸಿಕೊಂಡು ಓದಿ” ಎಂದು ಸಲಹೆ ನೀಡುತ್ತಾರೆ ಕನಿಕಾ..
ಅಖಿಲ ಭಾರತೀಯ ಮಟ್ಟದಲ್ಲಿ 59 ನೇ ಸಾಧಿಸಿದ ವಿದ್ಯಾನ್ಶು ಶೇಖರ್ ಝಾ, 2022 ರ UPSC ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿ. ಇವರು VIT ವೆಲ್ಲೂರಿನ ಮಾಜಿ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿ ಮತ್ತು DAV ಬರಿಯಾಟುವಿನ ಹಳೆಯ ವಿದ್ಯಾರ್ಥಿ. ಸಿವಿಲ್ ಸೇವೆಗೆ ಸೇರಲೇಬೇಕೆಂಬ ಛಲದಿಂದ ತಮ್ಮ ಬ್ಯಾಗ್ಗಳನ್ನು ಪ್ಯಾಕ್ ಮಾಡಿ, “ಐಎಎಸ್ ಅಧಿಕಾರಿಯಾದ ನಂತರವೇ ಹಿಂತಿರುಗುತ್ತೇನೆ” ಎಂದು ತಮ್ಮ ಕುಟುಂಬಕ್ಕೆ ತಿಳಿಸಿ ದೆಹಲಿಗೆ ತೆರಳಿದರು.
ಅವರ ತಂದೆ ಸುಶೀಲ್ ಝಾ ಅವರ ಪ್ರಕಾರ, ಇದು ವಿದ್ಯಾನ್ಮು ಅವರ ಐದು ವರ್ಷಗಳ ಬದ್ಧತೆ ಫಲ. ಮಗನಿಗೆ ಬೆಂಬಲವಾಗಿ ನಿಲ್ಲಲು ಅವರ ತಾಯಿ ದೆಹಲಿಗೆ ಸ್ಥಳಾಂತರಗೊಂಡರು. “ಇದು ತಾಯಿ ಮತ್ತು ಮಗ ಇಬ್ಬರಿಗೂ ಸಿಕ್ಕ ಜಯ,” ಎಂದು ಅವರ ತಂದೆ ಹೇಳುತ್ತಾರೆ.
UPSC ಯಲ್ಲಿ 17ನೇ ರ್ಯಾಂಕ್ ಪಡೆದ ಸಂಸ್ಕೃತಿ ತ್ರಿವೇದಿ, ಲೆಕ್ಕಪರಿಶೋಧನೆ ತರಬೇತಿಯ ನಡುವೆ ಪ್ರತಿದಿನ ಬೆಳಿಗ್ಗೆ ಮತ್ತು ತಡರಾತ್ರಿಯ ಸಮಯವನ್ನು ಉಪಯೋಗಿಸಿಕೊಂಡು UPSC ಗೆ ತಯಾರಿ ನಡೆಸಿದವರು. “ನಾನು ನನ್ನ ಕನಸನ್ನು ಎಂದಿಗೂ ಬಿಟ್ಟುಕೊಡಲಿಲ್ಲ. ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ಲೆಕ್ಕಪರಿಶೋಧನೆಯ ತರಬೇತಿ ಇದ್ದಾಗಲೂ ನಾನು ಯುಪಿಎಸ್ ಸಿ ಗೆ ತಯಾರಿ ನಡೆಸುತ್ತಿದೆ.
ಪ್ರತಿದಿನ 6 ರಿಂದ 7 ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದೆ. ಮುಂಜಾನೆ ಮತ್ತು ತಡರಾತ್ರಿ ಓದಿಕೊಳ್ಳುತ್ತಿದ್ದೆ” ಎಂದು ತಮ್ಮ ಯುಪಿಎಸ್ ಸಿಯ ಕಠಿಣ ತಯಾರಿ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.
ತಮ್ಮ ಮೂರನೇ ಪ್ರಯತ್ನದಲ್ಲಿ 90ನೇ ರ್ಯಾಂಕ್ ಗಳಿಸಿದ ಐಭವ್ ಕುಮಾರ್, ತಮ್ಮ ಬ್ಯಾಂಕ್ ಉದ್ಯೋಗವನ್ನು ತ್ಯಜಿಸಿ ಅಧ್ಯಯನಕ್ಕೆ ಸಂಪೂರ್ಣವಾಗಿ ಬದ್ಧರಾಗಿದ್ದರು. ದಿನಚರಿಯನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತ, ಒತ್ತಡದ ಸಂದರ್ಭದಲ್ಲಿ ಸಹ ಶಾಂತ ಮನಸ್ಸು ಕಾಯ್ದುಕೊಂಡರು. ತಮ್ಮ ಅಧ್ಯಯನಕ್ಕಾಗಿ ಅವರು ಹೆಚ್ಚಾಗಿ ಅವಲಂಬಿಸಿದ್ದು, ಅವರು, ಬುಲೆಟ್-ಪಾಯಿಂಟ್ ಟಿಪ್ಪಣಿಗಳನ್ನು.
ಇದನ್ನು ಓದಿದ ನಂತರ ಒಟ್ಟು 12 ಬಾರಿ ರಿವಿಷನ್ ಮಾಡಿದ್ದರಂತೆ ಐಭವ್. ಯುಪಿಎಸ್ ಸಿ ಓದಿಗೆ ಕೇವಲ ಕಠಿಣ ಪರಿಶ್ರಮ ಸಾಕಾಗುವುದಿಲ್ಲ, ಬದಲಾಗಿ ಸ್ಥಿರತೆ ಇರಬೇಕು” ಎನ್ನುತ್ತಾರೆ.
June 27, 2025 3:21 PM IST
