Last Updated:
UPSC Topper Anuj Agnihotri: ಕೈಯಲ್ಲಿ ಹಿಡಿದಿದ್ದ ಸ್ಟೆತಸ್ಕೋಪ್ ಪಕ್ಕಕ್ಕಿಟ್ಟು, ದೇಶದ ಆಡಳಿತ ವ್ಯವಸ್ಥೆಯನ್ನು ಸರಿಪಡಿಸುವ ಕನಸು ಕಂಡವರು ಡಾ. ಅನುಜ್ ಅಗ್ನಿಹೋತ್ರಿ. ರಾಜಸ್ಥಾನದ ಜೋಧ್ಪುರ ಜಿಲ್ಲೆಯ ರಾಹತಾ ಗ್ರಾಮದವರಾದ ಇವರು, ಇಂದು ಪ್ರಕಟವಾದ UPSC 2025ರ ಫಲಿತಾಂಶದಲ್ಲಿ ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ರ್ಯಾಂಕ್ (AIR 1) ಪಡೆದು ಇತಿಹಾಸ ಸೃಷ್ಟಿಸಿದ್ದಾರೆ.
UPSC Topper Anuj Agnihotri: ಕೈಯಲ್ಲಿ ಹಿಡಿದಿದ್ದ ಸ್ಟೆತಸ್ಕೋಪ್ ಪಕ್ಕಕ್ಕಿಟ್ಟು, ದೇಶದ ಆಡಳಿತ ವ್ಯವಸ್ಥೆಯನ್ನು ಸರಿಪಡಿಸುವ ಕನಸು ಕಂಡವರು ಡಾ. ಅನುಜ್ ಅಗ್ನಿಹೋತ್ರಿ (Dr. Anuj Agnihotri). ರಾಜಸ್ಥಾನದ ಜೋಧ್ಪುರ ಜಿಲ್ಲೆಯ ರಾಹತಾ ಗ್ರಾಮದವರಾದ ಇವರು, ಇಂದು ಪ್ರಕಟವಾದ UPSC 2025ರ ಫಲಿತಾಂಶದಲ್ಲಿ ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ರ್ಯಾಂಕ್ (AIR 1) ಪಡೆದು ಇತಿಹಾಸ ಸೃಷ್ಟಿಸಿದ್ದಾರೆ.
ಹೌದು, ಕೇವಲ ವೈದ್ಯಕೀಯ ಪದವೀಧರರಷ್ಟೇ ಅಲ್ಲದೆ, ಈಗಾಗಲೇ DANICS ಅಧಿಕಾರಿಯಾಗಿ ತರಬೇತಿ ಪಡೆಯುತ್ತಿದ್ದ ಅಗ್ನಿಹೋತ್ರಿ ಅವರು, ತಮ್ಮ ಛಲ ಬಿಡದೆ ಮೂರನೇ ಪ್ರಯತ್ನದಲ್ಲಿ ಐಎಎಸ್ (IAS) ಶಿಖರ ಏರಿದ್ದಾರೆ. ಇವರ ಈ ಅಸಾಮಾನ್ಯ ಸಾಧನೆಯು ದೇಶದ ಲಕ್ಷಾಂತರ ಆಕಾಂಕ್ಷಿಗಳಿಗೆ ಹೊಸ ಸ್ಫೂರ್ತಿ ನೀಡಿದೆ. ಡಾ. ಅನುಜ್ ಅಗ್ನಿಹೋತ್ರಿ ಅವರ ಕುರಿತಾದ ವಿವರಗಳು ಇಲ್ಲಿವೆ:
ಮುಂದುವರೆದು, ತಮ್ಮ ಐತಿಹಾಸಿಕ ಸಾಧನೆಯ ಕುರಿತು ಮಾತನಾಡಿದ ಡಾ. ಅನುಜ್ ಅಗ್ನಿಹೋತ್ರಿ, “ನನ್ನ ಯಶಸ್ಸಿನ ಹಿಂದಿನ ಅದೃಷ್ಟವೇ ಪ್ರಮುಖ ಅಂಶ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದರು. ಆದಾಗ್ಯೂ, ಅವರ ಸಿದ್ಧತೆ ವಿಭಿನ್ನ ಕಥೆಯನ್ನು ಹೇಳುತ್ತದೆ. ಆನ್ಲೈನ್ ತರಬೇತಿಯನ್ನು ಹೆಚ್ಚಾಗಿ ಅವಲಂಬಿಸಿ, ಅವರು ದೆಹಲಿಯಲ್ಲಿ ಎನ್ಶ್ಯೂರ್ ಐಎಎಸ್ನ ಮಾರ್ಗದರ್ಶನದೊಂದಿಗೆ ತಮ್ಮ ಸಂದರ್ಶನದ ಸಿದ್ಧತೆಯನ್ನು ಪೂರೈಸಿದರು. ಇದರೊಂದಿಗೆ, ಭಾರತೀಯ ಕಂದಾಯ ಸೇವೆಯ ಅಧಿಕಾರಿ ಸಚಿನ್ ಜೈನ್ ಅವರೊಂದಿಗೆ ಪ್ರತಿಯೊಂದು ಹಂತದಲ್ಲಿಯೂ ಮಾರ್ಗದರ್ಶನ ಮಾಡಿದ್ದಾರೆ. ಏತನ್ಮಧ್ಯೆ, ಅನುಜ್ ಸಾಧನೆಯ ಕುರಿತು, “ಅನುಜ್ ಯಾವಾಗಲೂ ಕಲಿಯಲು ಸಿದ್ಧರಿದ್ದರು, ಮತ್ತು ನಮ್ಮದೇ ಆದ ನಾಗರಿಕ ಸೇವೆಗಳ ಸಂದರ್ಶನಗಳಲ್ಲಿನ ನಮ್ಮ ಅನುಭವವು ಅವರಿಗೆ ಬಹಳಷ್ಟು ಸಹಾಯ ಮಾಡಿತು” ಎಂದು ಜೈನ್ ಹೇಳಿದ್ದಾರೆ.
ಡಾ. ಅನುಜ್ ಅಗ್ನಿಹೋತ್ರಿಯವರು ರಾಜಸ್ಥಾನದ ಜೋಧ್ಪುರ ಜಿಲ್ಲೆಯ ರಾಹತಾ (Rahata) ಎಂಬ ಹಳ್ಳಿಯವರು. ಮುಂದೆ ರಾಜಸ್ಥಾನದ ಕೋಟಾ ಸಮೀಪದ ಪರಮಾಣು ವಿದ್ಯುತ್ ಸ್ಥಾವರವಿರುವ ರಾವತ್ಭಾಟಾ (Rawatbhata) ಪಟ್ಟಣದಲ್ಲಿ ಬೆಳೆದರು.
ವೃತ್ತಿಯಿಂದ ವೈದ್ಯರಾದ ಇವರು, ಪ್ರತಿಷ್ಠಿತ ಏಮ್ಸ್ ಜೋಧ್ಪುರದಿಂದ (AIIMS Jodhpur) 2023ರಲ್ಲಿ ಎಂಬಿಬಿಎಸ್ (MBBS) ಪದವಿ ಪೂರೈಸಿದ್ದಾರೆ.
ಯುಪಿಎಸ್ಸಿ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆಯುವ ಮೊದಲೇ ಇವರು DANICS (Delhi, Andaman and Nicobar Islands Civil Service) ಸೇವೆಯಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಡಾ. ಅನುಜ್ ಅಗ್ನಿಹೋತ್ರಿಯವರು ಛಲ ಬಿಡದೆ ತಮ್ಮ ಮೂರನೇ ಪ್ರಯತ್ನದಲ್ಲಿ ದೇಶಕ್ಕೆ ಅಗ್ರಸ್ಥಾನವನ್ನು ಪಡೆದಿದ್ದಾರೆ. ಏತನ್ಮಧ್ಯೆ, ಎಂಬಿಬಿಎಸ್ ಓದಿದ ಐದು ವರ್ಷಗಳಿಗಿಂತಲೂ ಯುಪಿಎಸ್ಸಿ ತಯಾರಿ ಹಂತವು ಹೆಚ್ಚು ಸವಾಲಿನದ್ದಾಗಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಅದಕ್ಕೂ ಮುನ್ನ ಅವರು ತಮ್ಮ ಮೊದಲ ಪ್ರಯತ್ನದಲ್ಲೇ ಅವರು DANICS (ದೆಹಲಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ನಾಗರಿಕ ಸೇವೆ) ಎಂಬ ಗ್ರೂಪ್-ಬಿ ಕೇಂದ್ರ ನಾಗರಿಕ ಸೇವೆಯಲ್ಲಿ ಈಗಾಗಲೇ ಸ್ಥಾನ ಪಡೆದಿದ್ದರು, ಅಲ್ಲಿ ಅವರು ಪ್ರಸ್ತುತ ತರಬೇತಿಯಲಿದ್ದಾರೆ.
ಓದಿನ ಹೊರತಾಗಿ ಅಗ್ನಿಹೋತ್ರಿಯವರು ಕ್ರಿಕೆಟ್ನ ಕಟ್ಟಾ ಅಭಿಮಾನಿಯಾಗಿದ್ದು, ವಿರಾಟ್ ಕೊಹ್ಲಿ ಮತ್ತು ಪಿ.ಆರ್. ಶ್ರೀಜೇಶ್ ಅವರ ಆಟವನ್ನು ಇಷ್ಟಪಡುತ್ತಾರೆ. ಅಲ್ಲದೆ, ಇವರಿಗೆ ಸ್ಟ್ಯಾಂಡ್-ಅಪ್ ಕಾಮಿಡಿ ನೋಡುವುದು ಅಚ್ಚುಮೆಚ್ಚು. ಇದರೊಂದಿಗೆ ಸಮಾಜದಲ್ಲಿ ಸುಧಾರಣೆ ತರಲು ಮತ್ತು ಆಡಳಿತಾತ್ಮಕವಾಗಿ ಜನರ ಸೇವೆ ಮಾಡಲು ತಾವು ನಾಗರಿಕ ಸೇವೆಯನ್ನು ಆರಿಸಿಕೊಂಡಿದ್ದಾಗಿ ಅವರು ತಿಳಿಸಿದ್ದಾರೆ.
New Delhi,New Delhi,Delhi
UPSC 2025 ಪರೀಕ್ಷೆಯಲ್ಲಿ ಸಿಕ್ಸರ್ ಬಾರಿಸಿದ ಕೊಹ್ಲಿ ಅಭಿಮಾನಿ; ರಾಜಸ್ಥಾನದ ವೈದ್ಯ ಅನುಜ್ ಈಗ ಇಡೀ ದೇಶಕ್ಕೆ ನಂಬರ್ 1

