Last Updated:
ಮಂಡ್ಯದಲ್ಲಿ ಕೈಮಗ್ಗ ನೇಕಾರರಿಗೆ ಪ್ರಧಾನ ಮಂತ್ರಿ ಮುದ್ರಾ ಯೋಜನೆಡಿ 50 ಸಾವಿರದಿಂದ 2 ಲಕ್ಷ ರೂ ಸಾಲ, ಜಿಲ್ಲಾ ಪಂಚಾಯತ್ ಕೈಮಗ್ಗ ಜವಳಿ ಉಪ ನಿರ್ದೇಶಕರ ಕಚೇರಿಯಲ್ಲಿ ಮಾಹಿತಿ ಲಭ್ಯ.
ಮಂಡ್ಯ: ಕೈಮಗ್ಗ ಕ್ಷೇತ್ರದಲ್ಲಿ ದುಡಿಯುತ್ತಿರುವ ನೇಕಾರರಿಗೆ (Weavers) ಸಿಹಿಸುದ್ದಿ. 2026-27ನೇ ಸಾಲಿಗಾಗಿ ಕೈಮಗ್ಗ ಮತ್ತು ಜವಳಿ ಇಲಾಖೆಯು (Handloom and Textile Department) ‘ಪ್ರಧಾನ ಮಂತ್ರಿ ಮುದ್ರಾ ಯೋಜನೆ’ಯಡಿ (Prime Minister Mudra Scheme) ನೇಕಾರರಿಗೆ ಆರ್ಥಿಕ ಸಾಲ ಸೌಲಭ್ಯವನ್ನು ಘೋಷಿಸಿದೆ. ನಿಮ್ಮ ನೇಯ್ಗೆ ಚಟುವಟಿಕೆಗಳನ್ನು ವಿಸ್ತರಿಸಲು ಅಥವಾ ಸ್ವಂತ ಉದ್ಯೋಗವನ್ನು ಬಲಪಡಿಸಲು ಸರ್ಕಾರವೇ ಇದೀಗ ಬೆಂಬಲಕ್ಕೆ ನಿಂತಿದೆ.
ಹೆಚ್ಚಿನ ಮಾಹಿತಿಗಾಗಿ ಅಥವಾ ಅನುಮಾನಗಳ ಪರಿಹಾರಕ್ಕಾಗಿ ನೀವು ನೇರವಾಗಿ 9972405347 ದೂರವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೇಕಾರಿಕೆ ಕ್ಷೇತ್ರದಲ್ಲಿ ಸ್ವಾವಲಂಬಿಗಳಾಗಲು ಮತ್ತು ಆರ್ಥಿಕವಾಗಿ ಬೆಳೆಯಲು ಈ ಯೋಜನೆ ದೊಡ್ಡ ವೇದಿಕೆಯಾಗಲಿದೆ. ಮಂಡ್ಯ ಜಿಲ್ಲೆಯ ಎಲ್ಲಾ ಅರ್ಹ ಕೈಮಗ್ಗ ನೇಕಾರರು ಈ ಸೌಲಭ್ಯದ ಲಾಭ ಪಡೆದುಕೊಳ್ಳಬೇಕೆಂದು ಮನವಿ ಮಾಡಲಾಗಿದೆ. ನಿಮ್ಮ ಸ್ನೇಹಿತರು ಅಥವಾ ಪರಿಚಿತ ನೇಕಾರರಿಗೂ ಈ ಸುದ್ದಿಯನ್ನು ತಲುಪಿಸಿ, ಅವರ ಬದುಕಿಗೂ ಬೆಳಕಾಗಲಿ.
Mandya,Karnataka
Jun 03, 2026 12:57 PM IST

