Forest Official: ಮಾನಸಿಕ ನೆಮ್ಮದಿಗಾಗಿ ಪ್ರತಿಷ್ಠಿತ ಐಟಿ ಕಂಪನಿಯ ಕೆಲಸಕ್ಕೆ ರಾಜೀನಾಮೆ ಕೊಟ್ಟ ಟೆಕ್ಕಿ, ಈಗ ಅರಣ್ಯ ಅಧಿಕಾರಿ!
ಅವರ ಕುಟುಂಬ ಕೂಡ ತಮ್ಮ ಮಗನಿಗೆ ಒಳ್ಳೆಯ ಕಂಪನಿಯಲ್ಲಿ ಕೆಲಸ ಸಿಕ್ಕಿದೆ ಅವನ ಭವಿಷ್ಯ ಉತ್ತಮವಾಗಿರಲಿದೆ ಎಂದೇ ಭಾವಿಸಿದ್ದರು. ಆದರೆ ಮನೀಶ್ ತಮ್ಮ ಹಳ್ಳಿಯಾದ ಜಾರ್ಖಂಡ್ನ ದುಮ್ಕಾದಿಂದ ಸಿಟಿಗೆ ಪ್ರಯಾಣಿಸಿದಾಗ ಪೇಟೆಯ ಜೀವನ ಹಾಗೂ ಹಳ್ಳಿಯ ಜೀವನಕ್ಕಿರುವ ವ್ಯತ್ಯಾಸವನ್ನು ಕಂಡುಕೊಂಡರು. ಆ ಗದ್ದಲ, ಗಲಭೆ, ಧಾವಂತ, ಒತ್ತಡವನ್ನು ಮನೀಶ್ಗೆ ಭರಿಸಲಾಗಲಿಲ್ಲ. ಇದೇ ಸಮಯದಲ್ಲಿ ಅವರು ನಾಗರಿಕ ಸೇವಾ ಪರೀಕ್ಷೆಗಳಿಗೆ ಸಿದ್ಧಗೊಳ್ಳುತ್ತಿರುತ್ತಾರೆ ಹಾಗಾಗಿ ಒಂದು ತಿಂಗಳ ಬಳಿಕ ಉದ್ಯೋಗಕ್ಕೆ ರಾಜೀನಾಮೆ ನೀಡುತ್ತಾರೆ. ಬೀಟ್ ಅಧಿಕಾರಿಯಾಗಿ ಕೆಲಸ ಮಾಡುತ್ತಿರುವ ಮನೀಶ್…
