ಸ್ವತಂತ್ರ ಜೀವನ ಹಾಗೂ ತನ್ನ ಕಾಲ ಮೇಲೆ ತಾನು ನಿಂತುಕೊಳ್ಳಬೇಕೆಂಬ ಅದಮ್ಯ ಛಲ ಹೊಂದಿದ್ದ ಆಕೆ ಧೈರ್ಯದಿಂದ ಮುನ್ನುಗ್ಗಿದ್ದರು. ತಾನು ಏನೂ ಸಾಧಿಸದಿದ್ದರೆ ಹೆತ್ತವರು ತನಗೆ ವಿವಾಹ ಮಾಡಬಹುದು ಹಾಗೂ ತಾನು ಕಲ್ಪಿಸಿಕೊಂಡ ಜೀವನ ಎಂದಿಗೂ ಪಡೆಯದೇ ಇರಬಹುದು ಎಂಬ ಭಯವೇ ಸುರಭಿಯನ್ನ ಇಷ್ಟು ಎತ್ತರಕ್ಕೆ ಕೊಂಡೊಯ್ದಿದೆ ಎನ್ನಬಹುದು. ಆಕೆಯ ಭಯ ಆಕೆಯನ್ನು ಕಂಗೆಡಿಸಲಿಲ್ಲ ಬದಲಿಗೆ ತಮ್ಮ ನಿರ್ಧಾರದಲ್ಲಿ ಅಚಲವಾಗಿರುವಂತೆ ಪ್ರೇರೇಪಣೆ ನೀಡಿತು.
ಮುಂಬೈನ ಮಾರ್ವಾಡಿ ಕುಟುಂಬದಲ್ಲಿ ಜನಿಸಿದ್ದ ಸುರಭಿ ಉದ್ಯಮಿಗಳು ಮತ್ತು ಚಾರ್ಟರ್ಡ್ ಅಕೌಂಟೆಂಟ್ಗಳೇ ಇದ್ದ ಮನೆಯ ಮಗಳಾಗಿದ್ದರು. ಹೀಗಾಗಿ ಅವರಿಗೆ ಮುಂದಿನ ಗುರಿ ನಿಶ್ಚಯವಾಗಿತ್ತು. ಅದಾಗ್ಯೂ ಸುರಭಿ ಕ್ರಿಯಾತ್ಮಕತೆ ಇದ್ದ ಹುಡುಗಿಯಾಗಿದ್ದರು, ಆದರೆ ಯಾವ ಹಾದಿಯಲ್ಲಿ ಸಾಗಬೇಕೆಂಬ ಅನಿಶ್ಚತತೆ ಕಾಡುತ್ತಿತ್ತು.
ಪ್ರದರ್ಶನ ಕಲೆಗಳು ಮತ್ತು ಸೃಜನಶೀಲತೆಯ ಬಗ್ಗೆ ಆಸಕ್ತಿ ಹೊಂದಿದ್ದ ಆಕೆ ಕಾಮರ್ಸ್ ತೆಗೆದುಕೊಂಡಿದ್ದರು, ಹಾಗಾಗಿ ಸಿಎ ಅತ್ಯುತ್ತಮ ಆಯ್ಕೆ ಎಂದು ನಿರ್ಧರಿಸಿದರು. ಮೊದಲ ಪ್ರಯತ್ನದಲ್ಲೇ ಅವರು ಸಿಎ ಯ ಮೊದಲ ಹಂತವನ್ನು ಯಶಸ್ವಿಯಾಗಿ ಉತ್ತೀರ್ಣರಾದ ಆಕೆ ತಮ್ಮ ಯೋಜನೆಗೆ ಎಷ್ಟು ಬದ್ಧರಾಗಿದ್ದರು ಎಂಬುದನ್ನು ತೋರಿಸಿದರು. ಆದರೆ ತಾವು ಅಂದುಕೊಂಡದ್ದು ನಡೆಯದೇ ಇದ್ದರೆ ಮನೆಯಲ್ಲಿ ಅವರಿಗೆ ಬೇಕಾದಂತೆ ಮಾಡುತ್ತಾರೆ ಎಂಬ ಭಯ ಅವರನ್ನು ಕಾಡುತ್ತಿತ್ತು ಹಾಗಾಗಿ ಛಲವಿಟ್ಟು ಓದಿದರು.
ಸುರಭಿಯ ತಂದೆ ಮಗಳನ್ನು ಹೊಗಳಿದ್ದು ಆಕೆ ದೃಢನಿಶ್ಚಯವಿದ್ದ ಹುಡುಗಿ, ಶಾಂತ ಹಾಗೂ ಅಂತರ್ಮುಖಿ ಇದರೊಂದಿಗೆ ನಮಗೆ ಹೆಮ್ಮೆ ತರುವ ಕೆಲಸ ಮಾಡಿದ್ದಾರೆ ಎಂದಿದ್ದಾರೆ. ಮಧ್ಯಂತರ ಪರೀಕ್ಷೆಗೆ ಆಕೆ 14 ಗಂಟೆಗಳ ಕಾಲ ತಯಾರಿ ನಡೆಸಿದ್ದರು. ಫೋನ್ ಹಾಗೂ ಸಾಮಾಜಿಕ ತಾಣದಿಂದ ದೂರವಿದ್ದುಕೊಂಡೇ ಶಿಸ್ತಿನಿಂದ ಸಿದ್ಧತೆ ಮಾಡಿಕೊಂಡಿದ್ದರು. ಮಧ್ಯಂತರ ಪರೀಕ್ಷೆಯನ್ನು ಅವರು ಪಾಸ್ ಮಾಡಿಕೊಂಡರು. ಆದರೂ ಮನೆಯಲ್ಲಿ ವಿವಾಹಕ್ಕೆ ಒತ್ತಡ ಹೇರುತ್ತಾರೆಂಬ ಭಯ ಕೂಡ ಅವರನ್ನು ಕಾಡಿತ್ತು.
ಅಂತಿಮವಾಗಿ 2022 ರಲ್ಲಿ CA ಫೈನಲ್ ಪರೀಕ್ಷೆಯನ್ನು ಅವರು ಪಾಸ್ ಮಾಡಿಕೊಂಡರು. ಅವರ ಪ್ರಯಾಣ ಸುಲಭದ್ದಿರಲಿಲ್ಲ. ತ್ಯಾಗ, ನಿದ್ದೆ ಇಲ್ಲದ ರಾತ್ರಿಗಳು, ನಿರಂತರ ಒತ್ತಡದಿಂದ ಕೂಡಿತ್ತು ಎಂದು ಸುರಭಿ ಹೇಳುತ್ತಾರೆ. ಬದುಕಲು ಮಾತ್ರವಲ್ಲ, ಸ್ವತಂತ್ರವಾಗಿ ಬದುಕಲು ನನಗೆ ಪದವಿ ಮತ್ತು ಆರ್ಥಿಕ ಸ್ಥಿರತೆಯ ಅಗತ್ಯವಿತ್ತು ಎಂಬುದು ಅವರ ಮನದಾಳದ ಮಾತಾಗಿದೆ.
ಕೋವಿಡ್ ಸಮಯದಲ್ಲಿ ಸುರಭಿ ಬಾಲ್ಯದಲ್ಲಿ ತಾನು ಕಲಿತಿದ್ದ ಯೋಗ ಶಿಕ್ಷಣಕ್ಕೆ ಮರಳಿದರು. ಲಾಕ್ಡೌನ್ ಸಮಯದಲ್ಲಿ ಎಲ್ಲರೂ ಆರೋಗ್ಯ ಮತ್ತು ಫಿಟ್ನೆಸ್ ಬಗ್ಗೆ ಹೆಚ್ಚು ಜಾಗೃತರಾಗುತ್ತಿದ್ದಂತೆ ಆಕೆ ಗಂಭೀರವಾಗಿ ಅಭ್ಯಾಸವನ್ನು ಆರಂಭಿಸಿದರು. ತಮ್ಮ ತಾಯಿಯ ಜತೆಗೂಡಿಕೊಂಡು ಯೋಗಾಭ್ಯಾಸ ಮಾಡುತ್ತಾ ಬೆಳಗ್ಗಿನ ಸಮಯವನ್ನು ಅವರು ಕಳೆಯುತ್ತಿದ್ದರು.
ಯೋಗವು ಅವರ ಮನಸ್ಸನ್ನು ಶಾಂತಗೊಳಿಸಿದ್ದು ಮಾತ್ರವಲ್ಲ ಸ್ವಯಂ ಅಭ್ಯಾಸ, ಸೃಜನಶೀಲ ಭಂಗಿಗಳ ಪ್ರಯೋಗ ಮತ್ತು ಆಕೆಯ ಪ್ರಯಾಣವನ್ನು ಹಂಚಿಕೊಳ್ಳುವ ಮೂಲಕ, ಅದು ಅವರನ್ನು ಜನರೊಂದಿಗೆ ಸಂಪರ್ಕಿಸಿತು ಮತ್ತು ಕಂಟೆಂಟ್ ಕ್ರಿಯೇಶನ್ನಲ್ಲಿ ಹೊಸ ಮಾರ್ಗವನ್ನು ತೆರೆಯಿತು, ಆಕೆಗೆ ವಿಶಿಷ್ಟವಾದದ್ದನ್ನು ನಿರ್ಮಿಸಲು ಸಹಾಯ ಮಾಡಿತು.
ತಮ್ಮ ಸಿಎ ವೃತ್ತಿಜೀವನದಿಂದ ವಿಭಿನ್ನ ಹಾದಿಯಲ್ಲಿ ಸುರಭಿ ಪ್ರಯಾಣಿಸಿದ್ದರು ಇದು ಅವರ ಮನೆಯವರ ಆತಂಕಕ್ಕೆ ಕಾರಣವಾಗಿತ್ತು. ಆರಂಭದಲ್ಲಿ ಸುರಭಿ ಆರ್ಥಿಕ ಸಮಸ್ಯೆಗಳಿಗೆ ಒಳಗಾಗಿದ್ದರು ಆದರೂ ಮನೆಯಲ್ಲಿ ಸಹಾಯ ಕೇಳಿರಲಿಲ್ಲ. ತಮ್ಮ ದಾರಿ ಸರಿಯಾದುದು ಎಂಬ ದೃಢ ನಂಬಿಕೆ ಅವರಿಗಿತ್ತು.
ಆಕೆ ಯಾರ ಮಾತಿಗೂ ಧೃತಿಗೆಡಲಿಲ್ಲ ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಪೂರ್ಣ ಪ್ರಮಾಣದಲ್ಲಿ ಯೋಗ ತರಬೇತಿ, ಶಿಕ್ಷಣದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಸುರಭಿ ಸ್ವಯಂ-ಕಲಿತ ಯೋಗ ಸಾಧಕಿ, ಆದರೆ ಸೃಜನಶೀಲತೆ ಬೇಗನೆ ಅವರ ದೊಡ್ಡ ಶಕ್ತಿಯಾಯಿತು. ಏರಿಯಲ್ ಸ್ಕಿಲ್ ಅನ್ನು ಯೋಗದಲ್ಲಿ ಅಳವಡಿಸಿಕೊಂಡರು.
ಬಾಲಿವುಡ್ ನಟ ಹೃತಿಕ್ ರೋಷನ್ ಕೂಡ ಸುರಭಿಯವರ ಏರಿಯಲ್ ಸ್ಕಿಲ್ನಿಂದ ಉತ್ತೇಜಿತರಾಗಿ ಈ ಕಂಟೆಂಟ್ ಅನ್ನು ಮರುಪೋಸ್ಟ್ ಮಾಡಿದರು.
ಜೂನ್ 21, 2025 ರಂದು ದುಬೈನಲ್ಲಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಆಯೋಜಿಸಿದ್ದ ಸುರಭಿಯವರ ಮೊದಲ ಅಂತಾರಾಷ್ಟ್ರೀಯ ಯೋಗ ಕಾರ್ಯಾಗಾರದಲ್ಲಿ ಅವರನ್ನು ಗುರುತಿಸಿಕೊಳ್ಳುವಂತೆ ಮಾಡಿತು. ಇಂದು ಸುರಭಿ ಹಲವಾರು ಹುದ್ದೆಗಳನ್ನು ನಿಭಾಯಿಸುತ್ತಿದ್ದು ಕಂಟೆಂಟ್ ಕ್ರಿಯೇಟರ್ ಆಗಿ, ಅವರು ತಮ್ಮ ಪಾಡ್ಕ್ಯಾಸ್ಟ್ಗಳು ಮತ್ತು ಯೋಗ ವಿಷಯದ ಮೂಲಕ ಸಾವಿರಾರು ಜನರಿಗೆ ಸ್ಫೂರ್ತಿ ನೀಡುತ್ತಾರೆ.
ಅವರು ಈಗ ರಿಲಯನ್ಸ್ ನಂತಹ ಸಂಸ್ಥೆಗಳೊಂದಿಗೆ ಕ್ಷೇಮ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಇದರೊಂದಿಗೆ ಮುಂಬೈ ಮೂಲದ ಕ್ಷೇಮ ಮತ್ತು ಜೀವನಶೈಲಿ ಬ್ರ್ಯಾಂಡ್ ಪ್ರೊ-ಫಿರೋವನ್ನು ನಿರ್ಮಿಸುತ್ತಿದ್ದಾರೆ. ಇದು ಜನರು ಯೋಗ, ಉಸಿರಾಟದ ವ್ಯಾಯಾಮ ಮತ್ತು ಬುದ್ಧಿವಂತಿಕೆಯ ಚಲನೆಯ ಮೂಲಕ ಬಲಶಾಲಿ, ಶಾಂತ ಮತ್ತು ಹೆಚ್ಚು ಸಂಪರ್ಕ ಹೊಂದಲು ಸಹಾಯ ಮಾಡುತ್ತದೆ.
