Last Updated:
ಕುರಿ ಕಾಯುವವರ ಮಗ ಇಂದು ಕಷ್ಟಪಟ್ಟು ಓದಿ ಅತ್ಯಂತ ಕಠಿಣವಾದ ಮತ್ತು ಅಷ್ಟೇ ಸ್ಪರ್ಧಾತ್ಮಕವಾದ ಯುಪಿಎಸ್ಸಿ ಪರೀಕ್ಷೆಯನ್ನು ಪಾಸ್ ಮಾಡಿ ಇಂದು ಐಪಿಎಸ್ ಅಧಿಕಾರಿಯಾಗಿ ಹೊರ ಹೊಮ್ಮಿದ್ದಾರೆ.
ಯಶಸ್ಸು (Success) ಯಾರೊಬ್ಬರ ಸ್ವತ್ತಲ್ಲ ನೋಡಿ.. ಕಠಿಣ ಪರಿಶ್ರಮ, ಬಿಡದ ಛಲ, ತಾಳ್ಮೆ, ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ಮುನ್ನಡೆಯುವ ಗುಣ, ಆತ್ಮವಿಶ್ವಾಸದಿಂದಿರುವ ಗುಣ ಮತ್ತು ತಾಳ್ಮೆ (Patience) ಎಲ್ಲವೂ ಯಶಸ್ಸು ಪಡೆಯಲು ಬೇಕಾಗಿರುವ ಬಹು ಮುಖ್ಯವಾದ ಅಂಶಗಳು. ಯಾವ ಕುಟುಂಬದಲ್ಲಿ ಹುಟ್ಟಿದ್ದೇವೆ, ಎಂತಹ ಪರಿಸ್ಥಿತಿಯಲ್ಲಿ ಬೆಳೆದಿದ್ದೇವೆ ಎಂಬುದು ಕೆಲವೊಬ್ಬರಿಗೆ ತಾವು ಜೀವನದಲ್ಲಿ ಅಂದುಕೊಂಡದ್ದನ್ನ ಸಾಧಿಸುವಲ್ಲಿ ಯಾವುದೇ ರೀತಿಯ ತೊಡಕುಗಳಾಗುವುದಿಲ್ಲ ನೋಡಿ.
ಇಲ್ಲಿಯೂ ಸಹ ಇದಕ್ಕೆ ಉದಾಹರಣೆ ಎಂಬಂತಿರುವ ಒಂದು ನಿಜವಾದ ಸ್ಪೂರ್ತಿ ನೀಡುವ ಯಶಸ್ಸಿನ ಕಥೆ ಇದೆ. ಬಿರ್ದೇವ್ ಸಿದ್ಧಪ್ಪ ಡೋನೆ ಎಂಬ ಕುರಿ ಕಾಯುವವರ ಮಗ ಇಂದು ಕಷ್ಟಪಟ್ಟು ಓದಿ ಅತ್ಯಂತ ಕಠಿಣವಾದ ಮತ್ತು ಅಷ್ಟೇ ಸ್ಪರ್ಧಾತ್ಮಕವಾದ ಯುಪಿಎಸ್ಸಿ ಪರೀಕ್ಷೆಯನ್ನು ಪಾಸ್ ಮಾಡಿ ಇಂದು ಐಪಿಎಸ್ ಅಧಿಕಾರಿಯಾಗಿ ಹೊರ ಹೊಮ್ಮಿದ್ದಾರೆ.
ಬಿರ್ದೇವ್ ಅವರು ಆರಂಭದಲ್ಲಿ ಎಲ್ಲಾ ಮಕ್ಕಳಂತೆ ಶಾಲೆಗೆ ಹೋಗಿ ಓದಲಿಲ್ಲವಂತೆ, ಅವರ ತಂದೆಯ ಜೊತೆಗೆ ಕುರಿಗಳನ್ನು ಮೇಯಿಸುವುದು ಅವರ ದೈನಂದಿನ ಜೀವನದ ಭಾಗವಾಗಿತ್ತಂತೆ. ಅವರಿಗೆ ಇರಲು ಒಂದು ಮನೆ ಸಹ ಇರಲಿಲ್ಲವಂತೆ, ಗ್ರಾಮೀಣ ಮಹಾರಾಷ್ಟ್ರದ ತೆರೆದ ಮೈದಾನಗಳಲ್ಲಿ ಅವರು ತಮ್ಮ ಬಾಲ್ಯವನ್ನು ಕಳೆದರು ಅಂತ ಹೇಳಿದರೆ ತಪ್ಪಾಗುವುದಿಲ್ಲ. ಜವಾಬ್ದಾರಿ ಎಂಬುದು ಚಿಕ್ಕವಯಸ್ಸಿನಲ್ಲಿಯೇ ಅವರ ಹೆಗಲೇರಿತು.
ನಂತರ ಅವರು ಅಲ್ಲಿಯೇ ಊರಲ್ಲಿ ಇರುವಂತಹ ಸರ್ಕಾರಿ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣವನ್ನು ಶುರು ಮಾಡಿದರು, ಮನೆಯಲ್ಲಿರುವ ಜವಾಬ್ದಾರಿಗಳ ಜೊತೆಗೆ ಓದನ್ನು ಸಹ ಮುಂದುವರೆಸಿಕೊಂಡು ಹೋದರು. ಓದಿನಲ್ಲಿ ಬಹುಬೇಗನೆ ಅವರಿಗೆ ಅಂತಹ ಯಶಸ್ಸು ದೊರೆಯಲಿಲ್ಲ, ಅವರ ಕುರಿ ಮೇಯಿಸುವ ದಿನಚರಿಯೊಂದಿಗೆ ಅದು ನಿಧಾನವಾಗಿಯೇ ಸಾಗುತ್ತಿತ್ತು.
ಹೀಗೆ ನಿಧಾನವಾಗಿ ಶಾಲಾ ಜೀವನ ಮುಗಿದ ನಂತರ ಕಾಲೇಜು ಜೀವನವೂ ಸಹ ಇದೇ ರೀತಿಯಾಗಿ ಮುಂದುವರೆಯಿತು. ಆದರೆ ಓದಿಗೂ ಸಹ ಕೆಲಸದ ಜೊತೆಗೆ ಸಮಯವನ್ನು ತುಂಬಾನೇ ಎಚ್ಚರಿಕೆಯಿಂದ ನಿರ್ವಹಿಸುತ್ತಾ ಇವರು ಸಾಗಿದರು. ಯಾವುದೇ ರೀತಿಯ ಸಂಪನ್ಮೂಲಗಳು ಇರದೇ ಇರುವುದರಿಂದ ಮೊದಲಿಗೆ ತುಂಬಾನೇ ತೊಂದರೆಯಾಯಿತು. ಆದರೂ ಸಹ ಇವರ ಪ್ರಯತ್ನ ಮಾತ್ರ ತುಂಬಾನೇ ಸ್ಥಿರವಾಗಿತ್ತು. ನಂತರ ಇವರಿಗೆ ನಾಗರಿಕ ಸೇವೆಗಳ ಪರಿಕ್ಷೆಯತ್ತ ನಿಧಾನವಾಗಿ ಒಲವು ಬೆಳೆಯಲು ಶುರುವಾಯಿತು ಮತ್ತು ಆ ಪರೀಕ್ಷೆಗೆ ತಯಾರಿ ಶುರು ಮಾಡಿದರು.
ಬಿರ್ದೇವ್ ಅವರ ಈ ಹಾದಿ ಅಷ್ಟೊಂದು ಸುಗಮವಾಗಿರಲಿಲ್ಲ, ಒಂದಕ್ಕಿಂತ ಹೆಚ್ಚು ಬಾರಿ ಪರೀಕ್ಷೆಗೆ ಹಾಜರಾದರು. ಪ್ರತಿ ಪ್ರಯತ್ನಕ್ಕೂ ಮರುಮೌಲ್ಯಮಾಪನದ ಅಗತ್ಯವಿತ್ತು. ಅಧ್ಯಯನ ಯೋಜನೆಗಳನ್ನು ಪರಿಷ್ಕರಿಸಲಾಯಿತು. ಪರೀಕ್ಷೆಯ ತಯಾರಿಯಲ್ಲಿ ಮತ್ತು ಬರವಣಿಗೆಯಲ್ಲಿ ಆದಂತಹ ತಪ್ಪುಗಳನ್ನು ಮರು ಪರಿಶೀಲಿಸಲಾಯಿತು. ಇಂತಹ ಬಿಟ್ಟು ಬಿಡದ ಪ್ರಯತ್ನ ಅವರ ಫಲಿತಾಂಶವನ್ನು ಕೊನೆಗೂ ಬದಲಾಯಿಸಿತು.
ಯುಪಿಎಸ್ಸಿ ಪರೀಕ್ಷೆಯನ್ನು ಕೊನೆಗೂ ತಮ್ಮ ಸತತ ಪ್ರಯತ್ನ ಮತ್ತು ತಾಳ್ಮೆಯಿಂದ ಪಾಸ್ ಮಾಡಿ ಐಪಿಎಸ್ ಅಧಿಕಾರಿಯಾಗಿ ಬಿರ್ದೇವ್ ಅವರು ದೊಡ್ಡ ಮಟ್ಟದ ಸಾಧನೆಯನ್ನೇ ಮಾಡಿದರು. ಈ ಸಾಧನೆ ಅವರ ಜೀವನವನ್ನು ಅಷ್ಟೇ ಬದಲಾಯಿಸದೇ ಅವರ ಕುಟುಂಬದವರ ಜೀವನವನ್ನು ಸಹ ಬದಲಾಯಿಸಿತು.
ಬಿರ್ದೇವ್ ಅವರು ತಮ್ಮ ಕುಟುಂಬದ ಸದಸ್ಯರನ್ನು ಮೊಟ್ಟ ಮೊದಲ ಬಾರಿಗೆ ವಿಮಾನದಲ್ಲಿ ಕರೆದುಕೊಂಡು ಹೋದರು. ಈ ಯಶಸ್ಸಿನ ಪ್ರಯಾಣ ಹೇಗೆ ಒಬ್ಬ ಸಾಧಾರಣ ವ್ಯಕ್ತಿ ತಮ್ಮ ಕಠಿಣ ಪರಿಶ್ರಮದಿಂದ ಮತ್ತು ತಾಳ್ಮೆಯಿಂದ ದೊಡ್ಡ ಮಟ್ಟದ ಯಶಸ್ಸು ಸಾಧಿಸಬಹುದು ಎಂಬುದನ್ನು ತೋರಿಸುತ್ತದೆ. ಇದು ಅನೇಕ ಯುವ ಪ್ರತಿಭೆಗಳಿಗೆ ಒಂದು ರೀತಿಯ ದಾರಿ ದೀಪವಾಗುತ್ತದೆ.

