Advertisement
Advertisement

PUC Result: ಸದ್ಯಕ್ಕಿಲ್ಲ ಪಿಯು ರಿಸಲ್ಟ್​! ವಿದ್ಯಾರ್ಥಿಗಳೇ, ಫಲಿತಾಂಶ ಹೊರಬೀಳೋದು ಯಾವಾಗ ಗೊತ್ತಾ?

Bhimasi 01 53 2026 04 1a20927f5c7adc5d2e73d2cfe23757aa 1200x675.jpg


Last Updated:

Karnataka PUC exam results delay: ಕಳೆದ ಫೆ.28 ರಿಂದ ಮಾ.17ರವರೆಗೆ ನಡೆದಿದ್ದ ಪಿಯು ಪರೀಕ್ಷೆ -1 ನಡೆದಿತ್ತು. ರಾಜ್ಯಾದ್ಯಂತ 7,10,363 ವಿದ್ಯಾರ್ಥಿಗಳು  ನೋಂದಣಿಯಾಗಿದ್ದರು. ಅಲ್ಲದೆ ಲಕ್ಷಾಂತರ ವಿದ್ಯಾರ್ಥಿಗಳು ಈ ಫಲಿತಾಂಶಕ್ಕಾಗಿ ಕಾದುಕುಳಿತಿದ್ದರು. ಆದರೆ ಕಾರಣಾಂತರಗಳಿಂದ ಪರೀಕ್ಷೆ ಮುಂದೂಡಿದ್ದು ಖಚಿತವಾಗಿದೆ. ಹಾಗಾದರೆ ಕಾರಣವಾಗಿದ್ದು ಕೊನೆಯ ದಿನದ ಮುಗಿಯದೇ ಇದ್ದ ಮೌಲ್ಯಮಾಪನವೇ? ಅಥವಾ ಬೇರೆಯದೇ ಕಾರಣವೇ ಎನ್ನುವುದನ್ನು ನೋಡೋಣ ಬನ್ನಿ.  

ಪಿಯು ರಿಸಲ್ಟ್​ ಅಪ್ಡೇಟ್​!
ಪಿಯು ರಿಸಲ್ಟ್​ ಅಪ್ಡೇಟ್​!

ಕಳೆದ ಫೆ.28 ರಿಂದ ಮಾ.17ರವರೆಗೆ ನಡೆದಿದ್ದ ಪಿಯು ಪರೀಕ್ಷೆ -1 (PUC Examination) ನಡೆದಿತ್ತು. ರಾಜ್ಯಾದ್ಯಂತ 7,10,363 ವಿದ್ಯಾರ್ಥಿಗಳು (Students) ನೋಂದಣಿಯಾಗಿದ್ದರು. ಅಲ್ಲದೆ ಲಕ್ಷಾಂತರ ವಿದ್ಯಾರ್ಥಿಗಳು (Lac of Students) ಈ ಫಲಿತಾಂಶಕ್ಕಾಗಿ ಕಾದುಕುಳಿತಿದ್ದರು. ಆದರೆ ಕಾರಣಾಂತರಗಳಿಂದ ಪರೀಕ್ಷೆ ಮುಂದೂಡಿದ್ದು ಖಚಿತವಾಗಿದೆ. ಹಾಗಾದರೆ ಕಾರಣವಾಗಿದ್ದುಮುಗಿಯದೇ ಇದ್ದ ಮೌಲ್ಯಮಾಪನವೇ? ಅಥವಾ ಬೇರೆಯದೇ ಕಾರಣವೇ ಎನ್ನುವುದನ್ನು ನೋಡೋಣ ಬನ್ನಿ.  

ಕೊನೆಕ್ಷಣದಲ್ಲಿ ಪ್ಲಾನ್​ ಚೇಂಜ್​!

ನಾಳೆ ಅಂದರೆ ಮಂಗಳವಾರ ಫಲಿತಾಂಶ ಪ್ರಕಟಿಸಲು ಮಂಡಳಿಯು ಎಲ್ಲ ರೀತಿಯ ಸಿದ್ಧವಾಗಿತ್ತು.

ಆದರೆ, ಕೊನೆ ಕ್ಷಣದಲ್ಲಿ ಫಲಿತಾಂಶ ಪ್ರಕಟ ಡೌಟ್​ ಎನ್ನುವುದನ್ನು ಕೆಎಸ್​ಇಎಬಿ ಪ್ರಕಟಪಡಿಸಿತ್ತು.

ಆದರೆ ಫಲಿತಾಂಶ ಪ್ರಕಟಕ್ಕೆ ಇನ್ನೂ ಅನುಮತಿ ಸಿಕ್ಕಿಲ್ಲ ಎನ್ನುವುದು ಅಧಿಕಾರಿ ಮೂಲಗಳಿಂದ ಕೇಳಿ ಬಂದಿದೆ.

ಹಾಗಾದರೆ ಫಲಿತಾಂಶ ಪ್ರಕಟಕ್ಕೆ ತೊಡಕಾದ್ದಾದರೂ ಏನು ಎನ್ನುವುದರ ಕುರಿತು ಸಂಪೂರ್ಣ ವಿವರ ಇಲ್ಲಿದೆ.

ಫಲಿತಾಂಶ ಪ್ರಕಟಕ್ಕೆ ಇಲ್ಲ ಗ್ರೀನ್​ ಸಿಗ್ನಲ್​!

ಹೌದು, ಬಾಗಲಕೋಟೆ ಮತ್ತು ವಿಧಾನಸಭಾ ಉಪ ಚುನಾವಣೆಯ ನೀತಿ ಸಂಹಿತೆ ಜಾರಿ ಇರುವುದರಿಂದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಉಪಸ್ಥಿತಿಯಲ್ಲಿ ಫಲಿತಾಂಶ ಪ್ರಕಟಿಸಲು ಅನುಮತಿ ಸಿಕ್ಕದಿರುವ ಕಾರಣ, ಹಾಗೂ ಈ ಮೊದಲು ತಿಳಿಸಿದಂತೆ ಕೊನೆಯ ದಿನದ ಮೌಲ್ಯಮಾಪನ ಅಪೂರ್ಣವಾಗಿರುವುದರಿಂದ, ಅಲ್ಲದೆ ಚುನಾವಣಾ ಆಯೋಗ ಈವರೆಗೆ ಒಪ್ಪಿಗೆ ನೀಡದಿರುವುದರ ಕಾರಣ ಫಲಿತಾಂಶ ಪ್ರಕಟಣೆ ವಿಳಂಬವಾಗಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ವಿದ್ಯಾರ್ಥಿಗಳಲ್ಲಿ ಹೆಚ್ಚಿದ ಆತಂಕ!

ಮಾರ್ಚ್‌ನಲ್ಲಿ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆಗೆ ರಾಜ್ಯಾದ್ಯಂತ ಸುಮಾರು 7 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಹಾಜರಾಗಿದ್ದರು. ಪರೀಕ್ಷೆ ಮುಗಿದ ಬೆನ್ನಲ್ಲೇ ಮೌಲ್ಯಮಾಪನ ಕಾರ್ಯ ಚುರುಕಿನಿಂದ ಸಾಗಿತ್ತು. ಆದರೆ, ಈಗ ಕೊನೆಯ ಕ್ಷಣದಲ್ಲಿ ಮೌಲ್ಯಮಾಪನ ಪ್ರಕ್ರಿಯೆಯ ಸಣ್ಣ ಪುಟ್ಟ ಕೆಲಸಗಳು ಬಾಕಿ ಇರುವುದರಿಂದ ಫಲಿತಾಂಶದ ದಿನಾಂಕ ಮುಂದೂಡಲ್ಪಟ್ಟಿದೆ. ಇದು ಮುಂದಿನ ಉನ್ನತ ಶಿಕ್ಷಣಕ್ಕೆ ದಾಖಲಾಗಲು ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳಲ್ಲಿ ಹಾಗೂ ಪೋಷಕರಲ್ಲಿ ತುಸು ಆತಂಕ ಮೂಡಿಸಿದೆ ಎನ್ನಲಾಗಿದೆ.

ಮೌಲ್ಯಮಾಪನ ಪ್ರಕ್ರಿಯೆ ಬಾಕಿ!

ಈ ಕುರಿತು ಮಾಹಿತಿ ನೀಡಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ (KSEAB) ಅಧ್ಯಕ್ಷರಾದ ಪ್ರಕಾಶ್ ನಿಟ್ಟಾಳಿ, ಫಲಿತಾಂಶ ಪ್ರಕಟಣೆಗೆ ಸಂಬಂಧಿಸಿದ ಅಂತಿಮ ಹಂತದ ಮೌಲ್ಯಮಾಪನ ಕೆಲಸಗಳು ಇನ್ನು ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ. ಉತ್ತರ ಪತ್ರಿಕೆಗಳ ಮರುಪರಿಶೀಲನೆ ಮತ್ತು ಅಂಕಗಳ ಕ್ರೋಡೀಕರಣ ಕಾರ್ಯವು ಕೊನೆಯ ಹಂತದಲ್ಲಿದ್ದು, ಯಾವುದೇ ಲೋಪದೋಷಗಳಿಲ್ಲದಂತೆ ಫಲಿತಾಂಶ ನೀಡಲು ಮಂಡಳಿ ಸಜ್ಜಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಾಳೆ ಫಲಿತಾಂಶ ಬಿಡುಗಡೆ ಮಾಡುವ ಸಾಧ್ಯತೆ ತೀರಾ ಕಡಿಮೆ ಎಂದು ಅವರು ನ್ಯೂಸ್‌ 18 ವಾಹಿನಿಗೆ ಸ್ಪಷ್ಟಪಡಿಸಿದ್ದಾರೆ.

ಹಾಗಾದರೆ ಫಲಿತಾಂಶಕ್ಕೆ ಮಹೂರ್ತ ಯಾವಾಗ?

ಉಪ ಚುನಾವಣೆ ಹಾಗೂ ಕೊನೆಯ ದಿನದ ಮೌಲ್ಯಮಾಪನ ಅಪೂರ್ಣ ಸೇರಿ ಕೆಲ ತಾಂತ್ರಿಕ ಕಾರಣಗಳಿಂದಲೂ ಪರೀಕ್ಷೆ ಮುಂದೂಡಿರುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಮೌಲ್ಯಮಾಪನ ಚಟುವಟಿಕೆ ಪೂರ್ಣಗೊಂಡರೂ, ಫಲಿತಾಂಶ ಮುಂದೂಡುವ ಪರಿಸ್ಥಿತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಚುನಾವಣೆ ಮುಗಿದು ಫಲಿತಾಂಶ ಬಂದ ಮೇಲೆ ವಿದ್ಯಾರ್ಥಿಗಳಿಗೆ ಗ್ರೀನ್​ ಸಿಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ವರದಿ: ಪ್ರಗತಿ ಶೆಟ್ಟಿ, ನ್ಯೂಸ್​ 18 ಕನ್ನಡ, ಬೆಂಗಳೂರು



Source link

Leave a Reply

Your email address will not be published. Required fields are marked *

TOP