Advertisement
Advertisement

PUC Result: ದ್ವಿತೀಯ ಪಿಯುಸಿ ಪರೀಕ್ಷೆ-2ರ ವೇಳಾಪಟ್ಟಿ ಪ್ರಕಟ; ಇದೇ ತಿಂಗಳಲ್ಲಿ ಮಹೂರ್ತ ಫಿಕ್ಸ್​! ಇಲ್ಲಿದೆ ದಿನಾಂಕದ ಮಾಹಿತಿ!

Bhimasi 01 59 2026 04 f38df8b4e10e231eff3dcc58c6e6cb29 1200x675.jpg


Last Updated:

Karnataka 2nd PUC Exam 2 timetable: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ದ್ವಿತೀಯ ಪಿಯುಸಿ ಮೊದಲ ಪರೀಕ್ಷೆ ಫಲಿತಾಂಶ ಪ್ರಕಟಿಸಿದ ಬೆನ್ನಲ್ಲೇ, ಎರಡನೇ ಪರೀಕ್ಷೆಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

ಪಿಯುಸಿ ಪರೀಕ್ಷೆ-2ರ ವೇಳಾಪಟ್ಟಿ!
ಪಿಯುಸಿ ಪರೀಕ್ಷೆ-2ರ ವೇಳಾಪಟ್ಟಿ!

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ದ್ವಿತೀಯ ಪಿಯುಸಿ (PUC Result Out) ಮೊದಲ ಪರೀಕ್ಷೆ ಫಲಿತಾಂಶ (Result) ಪ್ರಕಟಿಸಿದ ಬೆನ್ನಲ್ಲೇ, ಎರಡನೇ ಪರೀಕ್ಷೆಯ (Exam-2) ವೇಳಾಪಟ್ಟಿಯನ್ನು(Time Table) ಬಿಡುಗಡೆ ಮಾಡಿದೆ. ಈ ಬಾರಿ ವಿದ್ಯಾರ್ಥಿಗಳಿಗೆ ತಮ್ಮ ಅಂಕ ಸುಧಾರಿಸಿಕೊಳ್ಳಲು ಉತ್ತಮ ಅವಕಾಶ ನೀಡಲಾಗಿದ್ದು, ಎರಡನೇ ಪರೀಕ್ಷೆಯು ಏಪ್ರಿಲ್ 30 ರಿಂದ ಮೇ 13ರ ವರೆಗೆ ನಡೆಯಲಿದೆ ಎಂದು ಸುದ್ದಿ ಕೆಎಸ್​ಇಎಬಿ ಮೂಲಗಳು ತಿಳಿಸಿವೆ.

ಬಾಲಕಿಯರದ್ದೇ ಮೇಲುಗೈ!

ರಾಜ್ಯದ 2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಹೊರಬಿದ್ದಿದ್ದು, ಒಟ್ಟಾರೆ ಶೇ. 84ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಸಂಭ್ರಮ ಮೂಡಿದೆ. ಪ್ರತಿವರ್ಷದಂತೆ ಈ ಬಾರಿಯೂ ವಿದ್ಯಾರ್ಥಿನಿಯರು ವಿದ್ಯಾರ್ಥಿಗಳಿಗಿಂತ ಹೆಚ್ಚಿನ ಸಾಧನೆ ಮಾಡುವ ಮೂಲಕ ಮೇಲುಗೈ ಸಾಧಿಸಿದ್ದಾರೆ.

ಈ ನಿಟ್ಟಿನಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿ ಕರೆದು ಯಶ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂಧಿಸಿದ್ದಾರೆ. ಕಳೆದ ಬಾರಿಗಿಂತ ಶೇ.13 ರಷ್ಟು ಫಲಿತಾಂಶ ಹೆಚ್ಚಾಗಿದೆ. ಆದರೆ ಎಂದಿನಂತೆ ಬಾಲಕಿಯರದ್ದೇ ಮೇಲುಗೈ ಆಗಿದೆ. ಉಡುಪಿ ಜಿಲ್ಲೆ ಪ್ರಥಮ ಸ್ಥಾನ ಪಡೆದರೆ, ಶೇ.83.65 ಬಾಲಕರು ಉತ್ತೀರ್ಣರಾಗಿದ್ದಾರೆ. ಈ ಕುರಿತು ಹಲವಾರು ವಿಷಯಗಳನ್ನು ಹಂಚಿಕೊಂಡ ಮಾಹಿತಿ ಇಲ್ಲಿದೆ.

ಶಿಕ್ಷಣ ಸಚಿವ ಮಧು ಬಂಗಾರಪ್ಪ!
ಈ ಬಾರಿ ಶೇ.13ರಷ್ಟು ಫಲಿತಾಂಶ ಹೆಚ್ಚಳ!

ಶೇಕಡಾ 13ರಷ್ಟು ಕಳೆದ ಬಾರಿಗಿಂತ ಈ ಸಲ ಹೆಚ್ಚಳ ಆಗಿದೆ.  ಈ ಸಲವೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಶೇಕಡಾ 88.70 ಬಾಲಕಿಯರು, ಶೇಕಡಾ 83.65ರಷ್ಟು ಬಾಲಕರು ಉತ್ತೀರ್ಣರಾಗಿದ್ದಾರೆ. ಉಡುಪಿ ಜಿಲ್ಲೆ ಪ್ರಥಮ ಸ್ಥಾನ ಪಡೆದಿದ್ದು  ಶೇಕಡಾ 96.39ರಷ್ಟು ಮಕ್ಕಳು ಉತ್ತೀರ್ಣರಾಗಿದ್ದಾರೆ.   ಹಾಸನ ಜಿಲ್ಲೆಗೆ ಕೊನೆಯ ಸ್ಥಾನ  ಶೇಕಡಾ 89.71ರಷ್ಟು ಫಲಿತಾಂಶ ದಾಖಲಾಗಿದೆ ಎಂದು ಮಧು ಬಂಗಾರಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸ್ಟ್ರೀಮ್​ ವೈಸ್​ ರಿಸಲ್ಟ್​ ಘೋಸಿಸಿದ ಸಚಿವ!

ಕಲಾ ವಿಭಾಗದಲ್ಲಿ 1ಲಕ್ಷದ 34 ಸಾವಿರದ 921 ವಿದ್ಯಾರ್ಥಿಗಳು ಹಾಜರಾಗಿದ್ದರು. ಅದರಲ್ಲಿ 98ಸಾವಿರದ 310 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇಕಡಾವಾರು ನೋಡುವುದಾದರೆ, ಶೇಕಡಾ 72.89ರಷ್ಟು ವಿದ್ಯಾರ್ಥಿಗಳು ಪಾಸ್​ ಆಗಿದ್ದಾರೆ ಎನ್ನುವುದು ತಿಳಿದು ಬಂದಿದೆ. ಅಲ್ಲದೇ  ವಾಣಿಜ್ಯ ವಿಭಾಗದಲ್ಲಿ 2 ಲಕ್ಷದ 7 ಸಾವಿರದ 85 ವಿದ್ಯಾರ್ಥಿಗಳು ಹಾಜರಾಗಿದ್ದರೆ, 1 ಲಕ್ಷದ 82 ಸಾವಿರದ 317 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ, ಶೇಕಡಾವಾರು ನೋಡುವುದಾದರೆ,  ಶೇಕಡಾ 88.04ರಷ್ಟು ವಿದ್ಯಾರ್ಥಿಗಳು ಪಾಸ್​ ಔಟ್​ ಆಗಿದ್ದಾರೆ ಎಂದು ಸಚಿವರು ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು. ಇನ್ನು  ವಿಜ್ಞಾನ ವಿಭಾಗದಲ್ಲಿ 2 ಲಕ್ಷದ 90 ಸಾವಿರದ 194 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. 2 ಲಕ್ಷದ 66 ಸಾವಿರದ 71 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇಕಡಾ 91.69ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಮಧು ಬಂಗಾರಪ್ಪ ತಿಳಿಸಿದ್ದಾರೆ.

ಉತ್ತರ ಪ್ರತಿಗೆ ಇದೇ ಲಾಸ್ಟ್​ ಡೇಟ್​!

ದ್ವಿತೀಯ ಪಿಯುಸಿ ಪರೀಕ್ಷೆ 1 ಉತ್ತರ ಪತ್ರಿಕೆ ಪ್ರತಿಗಾಗಿ ಅರ್ಜಿ ಸಲ್ಲಿಸಲು 10-04-2026 ರಿಂದ 15-04-2026ವರೆಗೂ ಸಮಯ ನೀಡಲಾಗಿದೆ. ಉತ್ತರ ಪತ್ರಿಕೆಯ ಕಾರ್ಬ್​ನ್​ ಕಾಪಿ ಡೌನ್‌ಲೋಡ್ ಮಾಡಲು 12-04-2026 ರಿಂದ 15-04-2026 ಮೀಸಲಾಗಿದೆ. ಅಲ್ಲದೇ ದಿನಾಂಕ ಏ.13ರಿಂದ ಏ19ರವರೆಗೆ ಮರುಮೌಲ್ಯಮಾಪನ ಮತ್ತು ಮರು ಎಣಿಕೆಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಕಾರ್ಬನ್ ಕಾಫಿ ಪ್ರತಿ ಪಡೆಯಲು ಶುಲ್ಕ (ಪ್ರತಿ ವಿಷಯಕ್ಕೆ) 530₹, ಮರುಮೌಲ್ಯಮಾಪನ ಶುಲ್ಕ (ಪ್ರತಿ ವಿಷಯಕ್ಕೆ) 1670₹ ರೂ.,ಶುಲ್ಕ ನಿಗಧಿಯಾಗಿದೆ.



Source link

Leave a Reply

Your email address will not be published. Required fields are marked *

TOP