Last Updated:
ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಕೆಂಪಿ ಸಿದ್ದನ ಹುಂಡಿ ಹಾಗೂ ತಾಂಡವಪುರ ಗ್ರಾಮಗಳಲ್ಲಿ ಮಿನಿ ಉದ್ಯೋಗ ಮೇಳ ಆಯೋಜನೆಗೊಂಡಿದ್ದು, ಗ್ರಾಮೀಣ ಯುವಕರಿಗೆ ಉಚಿತ ಕೌಶಲ್ಯ ತರಬೇತಿ ಮೂಲಕ ಉದ್ಯೋಗಾವಕಾಶಗಳು ಹೆಚ್ಚಳವಾಗಿದೆ.
ಮೈಸೂರು: ಓದಿ ಮುಗಿಸಿ ಕೆಲಸವಿಲ್ಲದೇ ಮನೆಯಲ್ಲಿ (Home) ಕುಳಿತಿದ್ದೀರಾ? ಕೆಲಸಕ್ಕಾಗಿ (Job) ನಗರಗಳಿಗೆ ಅಲೆಯುವ ಕಾಲ ಈಗ ಮುಗಿದಿದೆ. ಮೈಸೂರು (Mysuru) ಜಿಲ್ಲೆಯ ನಂಜನಗೂಡು (Nanjanagudu) ತಾಲೂಕಿನ ಕೆಂಪಿ ಸಿದ್ದನ ಹುಂಡಿ ಹಾಗೂ ತಾಂಡವಪುರ ಗ್ರಾಮಗಳಲ್ಲಿ ಈಗ ಉದ್ಯೋಗದ ಹಬ್ಬ ಶುರುವಾಗಿದೆ. ಇಲ್ಲಿ ಆಯೋಜಿಸಲಾಗಿದ್ದ ಮಿನಿ ಉದ್ಯೋಗ ಮೇಳಕ್ಕೆ ಯುವ ಸಮುದಾಯ ಹೇಗೆ ಮುಗಿಬಿದ್ದಿದೆ ಎಂದರೆ, ನೋಡನೋಡುತ್ತಿದ್ದಂತೆಯೇ ನೂರಕ್ಕೂ ಹೆಚ್ಚು ಯುವಕ-ಯುವತಿಯರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರ.
ಕೌಶಲ್ಯ ಅಭಿವೃದ್ಧಿ ಇಲಾಖೆ ಮತ್ತು ಗ್ರಾಮ ಪಂಚಾಯಿತಿಗಳ ಈ ಮಹತ್ವದ ನಿರ್ಧಾರದಿಂದಾಗಿ ಇಂದು ಹಳ್ಳಿಯ ಯುವಕರು ಆಶಾಭಾವನೆಯಿಂದ ನಗುತ್ತಿದ್ದಾರೆ. ಕೇವಲ ನೋಂದಣಿ ಮಾಡುವುದು ಮಾತ್ರವಲ್ಲ, ನಿಮ್ಮ ಆಸಕ್ತಿ ಮತ್ತು ಅರ್ಹತೆಗೆ ತಕ್ಕಂತೆ ಉಚಿತ ಕೌಶಲ್ಯ ತರಬೇತಿ ನೀಡಿ, ನಂತರ ನೇರವಾಗಿ ಉದ್ಯೋಗದ ಹಾದಿ ತೋರಿಸಿಕೊಡಲಾಗುತ್ತಿದೆ. ಇಂತಹ ಅದ್ಭುತ ಅವಕಾಶವನ್ನು ಯಾರಾದರೂ ಮಿಸ್ ಮಾಡಿಕೊಳ್ಳಲು ಸಾಧ್ಯವೇ?
Mysore,Karnataka

