Last Updated:
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್ ಸಹಯೋಗದ RUDSET ಅಣಬೆ ಬೇಸಾಯದ 10 ದಿನಗಳ ಉಚಿತ ತರಬೇತಿ, ಊಟ ವಸತಿ ಸಹಿತ, ಜೂನ್ 23 ರಿಂದ, ಅರ್ಜಿ ಜೂನ್ 20 ರೊಳಗೆ
ಬೆಂಗಳೂರು ಗ್ರಾಮಾಂತರ: ಸ್ವಂತ ಉದ್ಯೋಗ (Self Employed) ಶುರು ಮಾಡಬೇಕು, ಆದರೆ ಬಂಡವಾಳ ಅಥವಾ ತರಬೇತಿ (Training) ಇಲ್ಲ ಅಂತ ಚಿಂತೆಯಲ್ಲಿದ್ದೀರಾ? ಹಾಗಿದ್ದರೆ ಈ ಸುದ್ದಿ ನಿಮಗಾಗಿ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್ ಸಹಯೋಗದ ‘ರುಡ್ಸೆಟ್’ (RUDSET) ಸಂಸ್ಥೆಯು, ನಿರುದ್ಯೋಗಿ (Unemployed) ಯುವಕ-ಯುವತಿಯರಿಗಾಗಿ ಅಣಬೆ ಬೇಸಾಯದ 10 ದಿನಗಳ ಉಚಿತ (Free) ತರಬೇತಿಯನ್ನು ಆಯೋಜಿಸಿದೆ.
ಜೂನ್ 23 ರಿಂದ ತರಬೇತಿ ಆರಂಭವಾಗಲಿದೆ. ಜೂನ್ 20 ರೊಳಗೆ ಅರ್ಜಿ ಸಲ್ಲಿಸಿ.ಹೆಚ್ಚಿನ ಮಾಹಿತಿ ಮತ್ತು ನೋಂದಣಿಗಾಗಿ ಈ ಸಂಖ್ಯೆಗಳಿಗೆ ಕರೆ ಮಾಡಿ: 9380162042, 9481506564, 9481778047. ರುಡ್ಸೆಟ್ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.
ಉಚಿತ ತರಬೇತಿ, ಉಚಿತ ಊಟ, ವಸತಿ ಜೊತೆಗೆ ಕೌಶಲ್ಯಪೂರ್ಣ ಬದುಕು. ಸ್ವಂತ ಉದ್ಯೋಗ ಮಾಡಿ ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಇದು ಸುವರ್ಣಾವಕಾಶ. ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರಲ್ಲಿ ಯಾರಾದರೂ ಕೆಲಸ ಹುಡುಕುತ್ತಿದ್ದರೆ, ಅವರಿಗೆ ಈ ಮಾಹಿತಿಯನ್ನು ತಕ್ಷಣ ಶೇರ್ ಮಾಡಿ. ಒಂದು ಸಣ್ಣ ನೋಂದಣಿ ನಿಮ್ಮ ಬದುಕನ್ನೇ ಬದಲಿಸಬಹುದು.
Bangalore Rural,Karnataka
Jun 05, 2026 11:20 AM IST

