Last Updated:
ಚಿತ್ರದುರ್ಗ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಜೂನ್ 19 ರಂದು ನೇರ ನೇಮಕಾತಿ ಸಂದರ್ಶನ ನಡೆಯಲಿದೆ. 18-30 ವರ್ಷದ ಅಭ್ಯರ್ಥಿಗಳು ವಿದ್ಯಾರ್ಹತೆಯ ಪ್ರಮಾಣ ಪತ್ರಗಳು, 5 ಬಯೋಡೆಟಾ ಪ್ರತಿ ಹಾಗೂ ಪಾಸ್ ಪೋಟ್ ಸೈಜ್ ಫೋಟೋ ತರಬೇಕು.
ಚಿತ್ರದುರ್ಗ: ನಗರದ ಉದ್ಯೋಗ ವಿನಿಮಯ ಕೇಂದ್ರದ (Employment ) ಆವರಣದಲ್ಲಿ ಜೂನ್ 19 ಗುರುವಾರದಂದು ಬೆಳಿಗ್ಗೆ 10 ರಿಂದ 2 ರವರೆಗೆ ನೇರ ನೇಮಕಾತಿ ಸಂದರ್ಶನ (Interview) ಹಮ್ಮಿಕೊಳ್ಳಲಾಗಿದೆ. ಮೇಳದಲ್ಲಿ ವಿವಿಧ ಖಾಸಗಿ ಕಂಪನಿಗಳು (Private Companies) ತಮ್ಮ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಲು ಪುರುಷ ಹಾಗೂ ಮಹಿಳೆ ಅಭ್ಯರ್ಥಿಗಳನ್ನು ಸ್ಥಳದಲ್ಲಿಯೇ ನೇಮಕಾತಿ ಮಾಡಿಕೊಳ್ಳುತ್ತಾರೆ.
ಆಸಕ್ತ ಅಭ್ಯರ್ಥಿಗಳು 18 ರಿಂದ 30 ವರ್ಷದೊಳಗಿದ್ದು, ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಡಿಪ್ಲೋಮಾ, ಐ.ಟಿ.ಐ, ಯಾವುದೇ ಪದವಿ ಗಳಿಸಿರುವ ವಿದ್ಯಾರ್ಹತೆಯ ಪ್ರಮಾಣ ಪತ್ರಗಳು, 5 ಬಯೋಡೆಟಾ ಪ್ರತಿ ಹಾಗೂ ಪಾಸ್ ಪೋಟ್ ಸೈಜ್ ಫೋಟೋ ತರಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 7022459064, 8105619020, ಅಥವಾ 9945587060 ಗೆ ಕರೆ ಮಾಡಬಹುದು. ಖುದ್ದಾಗಿ ನಗರದ ಹಳೇ ವೈಶಾಲಿ ಗೇಟ್ ಹತ್ತಿರದ ಸ್ಟೇಡಿಯಂ ತಿರುವಿನಲ್ಲಿರುವ ಉದ್ಯೋಗ ವಿನಿಮಯ ಕೇಂದ್ರದ ಜಿಲ್ಲಾ ಕಚೇರಿ ಸಂಪರ್ಕಿಸಬಹುದು ಎಂದು ಉದ್ಯೋಗಾಧಿಕಾರಿ ತಿಳಿಸಿದ್ದಾರೆ.
ಚಿತ್ರದುರ್ಗದ ಗ್ರಾಮೀಣ ಉಪವಿಭಾಗದ ಪಂಡರಹಳ್ಳಿ ಶಾಖಾ ವ್ಯಾಪ್ತಿಯಡಿಯ ವಿವಿಧ ಗ್ರಾಮಗಳಲ್ಲಿ ಹಳೇ ವಾಹಕವನ್ನು ತೆಗೆದು ಹೊಸ ವಾಹಕ ಅಳವಡಿಸುವ ಕಾಮಗಾರಿ ಆರಂಭವಾಗಿದೆ.
ಪಂಡರಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್-13 ಎನ್.ಜೆ.ವೈ, ಎಫ್-2 ಹುಲ್ಲೂರು, ಎಫ್-8 ಎನ್.ಜೆ.ವೈ ಸೊಲ್ಲಾಪುರ ಮಾರ್ಗಗಳಿಂದ ವಿದ್ಯುತ್ ಸರಬರಾಜು ಆಗಿ ಪಂಡರಹಳ್ಳಿ, ಗೊಡಬನಹಾಳ್, ಸೊಂಡೇಕೊಳ, ಅನ್ನೇಹಾಳ್, ಮಾಳಪ್ಪನಹಟ್ಟಿ, ಈರಜ್ಜನಹಟ್ಟಿ, ಸೊಲ್ಲಾಪುರ, ಕಾವಲಹಟ್ಟಿ, ಹುಲ್ಲೂರು, ಬೆನಕನಹಳ್ಳಿ, ಮುಂತಾದ ಗ್ರಾಮಗಳಲ್ಲಿ ಕಾಮಗಾರಿ ನಡೆಯುವ ದಿನಗಳಂದು ಬೆಳಿಗ್ಗೆ 11:30 ಗಂಟೆಯಿAದ ಸಂಜೆ 5:00 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಗ್ರಾಮ ಹಾಗೂ ಐ.ಪಿ ಸ್ಥಾವರದ ಗ್ರಾಹಕರು ಸಹಕರಿಸಬೆಕೆಂದು ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ನಾಗರಾಜ್.ಸಿ ಕೋರಿದ್ದಾರೆ.
Chitradurga,Chitradurga,Karnataka
June 18, 2025 5:43 PM IST

