ಕೆಲವರು ಪರಿಶ್ರಮ, ಅದೃಷ್ಟದಿಂದ ಮೊದಲ ಪ್ರಯತ್ನದಲ್ಲಿಯೇ ಪಾಸ್ ಆದರೆ, ಇನ್ನು ಕೆಲವರದ್ದು ಸೋತು ಗೆಲ್ಲುವ ಪ್ರಯತ್ನ. ಇನ್ನು ಕೆಲವರಿಗೆ ಈ ಪರೀಕ್ಷೆ ಪಾಸ್ ಮಾಡೋಕಾಗದೇ ಹುದ್ದೆಯ ಕನಸನ್ನೇ ಬಿಟ್ಟು ಬಿಡುತ್ತಾರೆ.
ನಮ್ಮ ದೇಶದಲ್ಲಿಯೇ ಇದೊಂದು ಕಠಿಣ ಪರೀಕ್ಷೆ. ಮೊದಲ ಪ್ರಯತ್ನದಲ್ಲಿಯೇ ಪಾಸ್ ಆಗೋದು ಬೆರಳೆಣಿಕೆಯ ಜನರಷ್ಟೇ. ಅಂತಹವರಲ್ಲಿ ಹರಿಯಾಣದ ಭಿವಾನಿಯ ಒಂದು ಸಣ್ಣ ಹಳ್ಳಿಯ ನಿವಾಸಿ ನಿಶಾ ಗ್ರೆವಾಲ್ ಕೂಡ ಒಬ್ಬರು.
ಐಎಎಸ್ ನಿಶಾ ಗ್ರೆವಾಲ್ ಹರಿಯಾಣದ ಬಡ ಕುಟುಂಬದಿಂದ ಬಂದವರು. ಕುಟುಂಬದ ಹಿನ್ನೆಲೆ, ವಯಸ್ಸು ಇವೆರೆಡನ್ನೂ ಮೀರಿ ಸಾಧಿಸಿ ತೋರಿದ್ದಾರೆ. 23ನೇ ವಯಸ್ಸಿನಲ್ಲಿಯೇ ಪ್ರತಿಷ್ಠಿತ ಪರೀಕ್ಷೆ ಬರೆದು ಪಾಸ್ ಆದ ಹೆಗ್ಗಳಿಕೆ ಇವರದ್ದು,
ನಿಶಾ ಗ್ರೆವಾಲ್ ಅವರ ತಂದೆ ವಿದ್ಯುತ್ ಇಲಾಖೆಯಲ್ಲಿದ್ದಾರೆ, ಆದರೆ ಅವರ ತಾಯಿ ಗೃಹಿಣಿ. ದೆಹಲಿ ವಿಶ್ವವಿದ್ಯಾಲಯದಿಂದ ರಾಜ್ಯಶಾಸ್ತ್ರದಲ್ಲಿ ಬಿಎ ಆನರ್ಸ್ ಮಾಡಿದ ನಂತರ, ನಿಶಾ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ಆರಂಭಿಸಿದರು.
12ನೇ ತರಗತಿಯಲ್ಲಿ 96% ಗಳಿಸಿದ ಈಕೆ ಮೊದಲಿನಿಂದಲೂ ಓದಿನಲ್ಲಿ ಬುದ್ಧಿವಂತೆ. ಪದವಿಯಲ್ಲಿ ನಿಶಾ ಇತಿಹಾಸ ಮತ್ತು ರಾಜ್ಯಶಾಸ್ತ್ರವನ್ನು ಅಧ್ಯಯನ ಮಾಡಿದರು. ಪದವಿಯ ಕೊನೆ ವರ್ಷದಲ್ಲಿಯೇ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸಿದರು ನಿಶಾ.
2019ರಲ್ಲಿ ಕಾಲೇಜು ಮುಗಿಸಿದ ನಂತರ, ಯಾವುದೇ ಕೋಚಿಂಗ್ ಸೆಂಟರ್ಗೆ ಹೋಗಿಲ್ಲ, ಬದಲಾಗಿ ಸೀದಾ ಅಜ್ಜನ ಮನೆಗೆ ತೆರಳಿದರು. ಅಲ್ಲಿನ ಅಜ್ಜನ ಮಾರ್ಗದರ್ಶನದ ಸಹಾಯದಿಂದ UPSC ಗೆ ಪ್ರತ್ಯೇಕವಾಗಿ ತಯಾರಿ ನಡೆಸಿದರು.
ಪರೀಕ್ಷೆ ಪಾಸ್ ಮಾಡುವ ಅಚಲ ನಿರ್ಧಾರದೊಂದಿಗೆ ನಿಶಾ ಪ್ರತಿದಿನ ಸುಮಾರು 8 ರಿಂದ 9 ಗಂಟೆಗಳ ಕಾಲ ಶ್ರದ್ಧೆಯಿಂದ ಅಧ್ಯಯನ ಮಾಡುತ್ತಿದ್ದರು. ತಮ್ಮ ಓದಿನಲ್ಲಿ ಭಾಗವಾಗಿ ಅವರು ಎನ್ಸಿಇಆರ್ಟಿ ಪುಸ್ತಕಗಳನ್ನು ಓದುತ್ತಿದ್ದರು. ನಂತರ ಅವರು ಸ್ಟ್ಯಾಂಡರ್ಡ್ ಬುಕ್ಸ್ನಿಂದ ಕೂಡ ತಯಾರಿ ನಡೆಸಿದರು.
ನಿಶಾ ಅವರ ಪರಿಶ್ರಮ, ತಾಳ್ಮೆ, ಶ್ರದ್ಧೆ ಇವುಗಳ ಫಲವಾಗಿ ಈಕೆ ಯುಪಿಎಸ್ಸಿ ಸಿವಿಲ್ ಸರ್ವೀಸಸ್ ಪರೀಕ್ಷೆ (ಸಿಎಸ್ಇ) 2020ರಲ್ಲಿ 51 ನೇ ಅಖಿಲ ಭಾರತ ರ್ಯಾಂಕ್ (ಎಐಆರ್) ಗಳಿಸಿದರು. ಮತ್ತೊಂದು ಹೆಮ್ಮೆಯ ವಿಚಾರ ಅಂದ್ರೆ ನಿಶಾ ತಮ್ಮ ಮೊದಲ ಪ್ರಯತ್ನದಲ್ಲೇ ಪರೀಕ್ಷೆಯಲ್ಲಿ ಉತ್ತೀರ್ಣರಾದರು.
ನಿಶಾ ಮೊದಲ ಪ್ರಯತ್ನದಲ್ಲಿಯೇ ಯುಪಿಎಸ್ಸಿ ಪರೀಕ್ಷೆಯಲ್ಲಿ ಯಶಸ್ಸನ್ನು ಸಾಧಿಸಿದರು ಮತ್ತು 2020ರ ನಾಗರಿಕ ಸೇವಾ ಪರೀಕ್ಷೆಯಲ್ಲಿ ಅಖಿಲ ಭಾರತ 51 ನೇ ರ್ಯಾಂಕ್ ಗಳಿಸುವ ಮೂಲಕ ಐಎಎಸ್ ಅಧಿಕಾರಿಯಾದರು. ಅವರು ಪರೀಕ್ಷೆಯಲ್ಲಿ ಉತ್ತೀರ್ಣರಾದಾಗ, ಅವರಿಗೆ ಕೇವಲ 23 ವರ್ಷ ವಯಸ್ಸಾಗಿತ್ತು.
ನಿಶಾ ಗ್ರೆವಾಲ್ ಅವರ ಅಜ್ಜ ಅವರ ಅಧ್ಯಯನ ಮತ್ತು ಐಎಎಸ್ ಅಧಿಕಾರಿಯಾಗುವ ಪ್ರಯಾಣದಲ್ಲಿ ಅವರಿಗೆ ಸಾಕಷ್ಟು ಬೆಂಬಲ ನೀಡಿದರು.
ನಿಶಾ ಅವರ ಅಜ್ಜ ರಾಮ್ಫಾಲ್ ಗ್ರೆವಾಲ್, ಶಿಕ್ಷಕ, ಅವರ ತಯಾರಿಯ ಹಿಂದೆ ಪ್ರಮುಖ ಪಾತ್ರ ವಹಿಸಿದರು ಮತ್ತು ಪ್ರತಿ ಹಂತದಲ್ಲೂ ಅವರಿಗೆ ಸಹಾಯ ಮಾಡಿದರು.
ಅಚಲ ಸಮರ್ಪಣೆ, ಶಿಸ್ತಿನ ದಿನಚರಿ ಮತ್ತು ಸ್ಥಿರವಾದ ಕಠಿಣ ಪರಿಶ್ರಮ ನಿಶಾ ಅವರ ಯಶಸ್ಸಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ ಅಂದ್ರೆ ತಪ್ಪಾಗಲ್ಲ.
Bangalore,Karnataka
Dec 19, 2025 12:08 PM IST
