ರಸಪ್ರಶ್ನೆಯನ್ನು ಸುಲಭವಾಗಿ ಆನ್ಲೈನ್ ಮೂಲಕ ಪ್ರವೇಶಿಸಬಹುದಾಗಿ ಸಚಿವಾಲಯ ತಿಳಿಸಿದೆ. 10 ಪ್ರಶ್ನೆಗಳ ರಸಪ್ರಶ್ನೆಗೆ ಒಟ್ಟು 300 ಸೆಕೆಂಡುಗಳು ಮಾತ್ರ. ಇದು ತ್ವರಿತ, ಮನರಂಜನಾತ್ಮಕ ಮತ್ತು ಜ್ಞಾನವರ್ಧಕ. ವಂದೇ ಮಾತರಂನ ಇತಿಹಾಸ, ಮೂಲ, ಸಾಹಿತ್ಯಿಕ ಹಿನ್ನೆಲೆ, ಕ್ರಾಂತಿಕಾರಿಗಳ ಮೇಲೆ ಅದರ ಪ್ರಭಾವ ಮತ್ತು ಇಂದಿನ ರಾಷ್ಟ್ರೀಯ ಆಚರಣೆಗಳಲ್ಲಿ ಅದರ ಸ್ಥಾನ, ಈ ಎಲ್ಲ ವಿಷಯಗಳನ್ನು ರಸಪ್ರಶ್ನೆ ನೇರವಾಗಿ ಸ್ಪರ್ಶಿಸುತ್ತದೆ.
ಪ್ರಶಸ್ತಿ ಮತ್ತು ಪ್ರಮಾಣಪತ್ರ-ಎಲ್ಲರಿಗೂ ಅವಕಾಶ!
ರಾಷ್ಟ್ರಮಟ್ಟದಲ್ಲಿ ಹೆಚ್ಚಿನ ಯುವಕರು ಮತ್ತು ನಾಗರಿಕರನ್ನು ಆಕರ್ಷಿಸಲು ಆಕರ್ಷಕ ಬಹುಮಾನಗಳನ್ನು ಸಚಿವಾಲಯ ಘೋಷಿಸಿದೆ. ಪ್ರಥಮ ಬಹುಮಾನ ₹25,000, ಎರಡನೇ ಬಹುಮಾನ ₹15,000, ಮೂರನೇ ಬಹುಮಾನ ₹10,000, ಅಗ್ರ 150 ಸ್ಪರ್ಧಿಗಳಿಗೆ: ತಲಾ ₹3,000 ರೂ.,ಗಳ ಬಹುಮಾನ ನೀಡಲಾಗುತ್ತದೆ. ಭಾಗವಹಿಸುವ ಎಲ್ಲರಿಗೂ ಇ-ಪ್ರಮಾಣಪತ್ರ ನೀಡಲಾಗುವುದು. ಅಂಕಗಳಿಂದ ತಾರತಮ್ಯವಿಲ್ಲದೆ ಪ್ರಮಾಣಪತ್ರ ನೀಡಲಾಗುತ್ತಿರುವುದು ಹೆಚ್ಚಿನ ಸಾರ್ವಜನಿಕ ಭಾಗವಹಿಸುವಿಕೆಗೆ ಕಾರಣವಾಗಿದೆ.
ವಿವರಗಳ ಮಾಹಿತಿ
ರಸಪ್ರಶ್ನೆ ಹೆಸರು : ವಂದೇ ಮಾತರಂ: 150 ವರ್ಷಗಳ ಸ್ಮರಣಾರ್ಥ ರಸಪ್ರಶ್ನೆ ಸ್ಪರ್ಧೆ
ಆಯೋಜಕರು: ಸಂಸ್ಕೃತಿ ಸಚಿವಾಲಯ + MyGov
ಉದ್ದೇಶ : 150 ವರ್ಷಗಳ ಪೂರೈಸಿದ ವಂದೇ ಮಾತರಂ ಗೀತೆಯ ಸ್ಮರಣೆಗಾಗಿ
ಯಾರು ಭಾಗವಹಿಸಬಹುದು : ಎಲ್ಲ ಭಾರತೀಯರು, ವಿದ್ಯಾರ್ಥಿಗಳು, ಶಿಕ್ಷಕರು
ಸ್ವರೂಪ : ಆನ್ಲೈನ್ ರಸಪ್ರಶ್ನೆ
ಬಹುಮಾನ : ₹25,000 ₹15,000 / ₹10,000 + ಅಗ್ರ 150 ಕ್ಕೆ ₹3,000 ರೂ,.ಗಳ ನಗದು ಬಹುಮಾನ,
ಪ್ರಮಾಣಪತ್ರ, ಭಾಗವಹಿಸಿದ ಎಲ್ಲರಿಗೂ ಇ-ಪ್ರಮಾಣಪತ್ರ ನೀಡಲಾಗುತ್ತದೆ.
ಥೀಮ್ : ವಂದೇ ಮಾತರಂ ಗೀತೆಯಇತಿಹಾಸ, ಮೂಲ, ಪರಂಪರೆಯ ಕುರಿತಾಗಿ ಪ್ರಶ್ನೆಗಳನ್ನು ತಯಾರಿಸಲಾಗುತ್ತದೆ.
ಪ್ರಶ್ನೆಗಳು : 10
ಸಮಯ : 300 ಸೆಕೆಂಡುಗಳು ಮಾತ್ರ
ಸಾಂಸ್ಕೃತಿಕ ಸಾಹಿತ್ಯದತ್ತ ಯುವ ಪೀಳಿಗೆಯನ್ನು ಕರೆದೊಯ್ಯುವ ಪ್ರಯತ್ನ!
ಈ ಉಪಕ್ರಮವು ಕೇವಲ ಸ್ಪರ್ಧೆಯಲ್ಲ, ಇದು ಭಾರತದ ಗಾಢ ಸಾಂಸ್ಕೃತಿಕ ಬೇರುಗಳೊಂದಿಗೆ ಯುವ ಪೀಳಿಗೆಯನ್ನು ಮರುಸಂಪರ್ಕಿಸುವ ಒಂದು ಚಳವಳಿಯಂತಿದೆ. ಡಿಜಿಟಲ್ ಪೀಳಿಗೆಯ ಮಕ್ಕಳಿಗೆ ಮತ್ತು ಯುವಕರಿಗೆ ಪರಂಪರೆ ಪರಿಚಯಿಸುವ ನವೀನ ಮಾರ್ಗವನ್ನೇ ಸಚಿವಾಲಯ ಇಲ್ಲಿ ತೆರೆದಿದೆ. MyGov ಜತೆಗಿನ ಸಹಯೋಗದಿಂದ ರಸಪ್ರಶ್ನೆ ದೇಶದ ಪ್ರತಿಯೊಂದು ರಾಜ್ಯ, ಪ್ರತಿಯೊಂದು ಶಾಲೆ ಹಾಗೂ ಸಾಮಾನ್ಯ ನಾಗರಿಕರ ಮನೆಗಳವರೆಗೆ ತಲುಪುವ ಪ್ರಯತ್ನ ಮಾಡಲಾಗುತ್ತಿದೆ.
ವಂದೇ ಮಾತರಂನ ಚೈತನ್ಯವನ್ನು, ಅದರ ದೇಶಭಕ್ತಿಯ ಹುಮ್ಮಸ್ಸನ್ನು, ಮತ್ತು ಪೀಳಿಗೆಗಳೇ ಮರೆತಿರದ ಶಕ್ತಿಯನ್ನು ಮರುಸ್ವರೂಪದಲ್ಲಿ ಅನುಭವಿಸುವ ಅವಕಾಶ ಈ ರಾಷ್ಟ್ರವ್ಯಾಪಿ ರಸಪ್ರಶ್ನೆ ನೀಡಲಿದೆ. ಆದ್ದರಿಂದ ಆಸಕ್ತರು ಆನ್ಲೈನ್ ರಸಪ್ರಶ್ನೆಯಲ್ಲಿ ಭಾಗವಹಿಸಿ, ಅನುಭವದ ಸಹಿತ ಬಹುಮಾನವನ್ನು ಗೆಲ್ಲಬಹುದು.
Bangalore [Bangalore],Bangalore,Karnataka
December 10, 2025 9:23 AM IST
