ಏನಿದು ಘಟನೆ?
ಉದ್ಯೋಗಿಗೆ ಬೆಳಗ್ಗೆ ಎದ್ದಾಗಿನಿಂದಲೇ ಬೆನ್ನುನೋವು, ಜ್ವರ ಮತ್ತು ಕೆಮ್ಮು ಇತ್ತು. ಕಚೇರಿಗೆ ಹೋಗುವ ಪರಿಸ್ಥಿತಿಯಲ್ಲಿ ಇಲ್ಲದ ಕಾರಣ ಹಾಗೂ ತನ್ನಿಂದ ಇತರರಿಗೆ ಸೋಂಕು ತಗುಲಬಾರದೆಂಬ ಕಾಳಜಿಯಿಂದ ಮನೆಯಿಂದಲೇ ಕೆಲಸ ಮಾಡುವ ಸೌಲಭ್ಯಕ್ಕಾಗಿ (Work From Home) ತನ್ನ ಮೇಲಧಿಕಾರಿಯನ್ನು ಸಂಪರ್ಕಿಸಿದ್ದಾರೆ.
ಆದರೆ, ಮೇಲಾಧಿಕಾರಿಯು “ಉದ್ಯೋಗಿ ಕೆಲಸ ಮಾಡಲು ದೈಹಿಕವಾಗಿ ಸದೃಢರಾಗಿದ್ದರೆ ಕಚೇರಿಗೆ ಬರಲೇಬೇಕು” ಎಂಬ ನಿಯಮವನ್ನು ಮುಂದಿಟ್ಟುಕೊಂಡು ಮನವಿಯನ್ನು ತಿರಸ್ಕರಿಸಿದ್ದಾರೆ.
ಉದ್ಯೋಗಿಗೆ ಬೇರೆ ಆಯ್ಕೆ ಇಲ್ಲದ್ದರಿಂದ ತೀವ್ರ ಜ್ವರ ಮತ್ತು ಕೆಮ್ಮು ಇದ್ದರೂ ಅದೇ ಪರಸ್ಥಿತಿಯಲ್ಲಿ ಕೆಲಸಕ್ಕೆ ಬಂದಿದ್ದಾರೆ.
ಉದ್ಯೋಗಿಯೇನೋ ಅನಾರೋಗ್ಯದ ಹೊರತಾಗಿಯೂ ಕೆಲಸಕ್ಕೆ ಬಂದರು. ಆದರೆ, ಅವರು ಬಂದ ನಂತರ ಆಗಮನವು ಸಾಕಷ್ಟು ಪ್ರಭಾವ ಬೀರಿದೆ.
ಕೆಮ್ಮುತ್ತಾ, ಶೀತದಿಂದ ಬಳಲುತ್ತಾ, ಪೂರಾ ದಿನ ಕಚೇರಿಯಲ್ಲಿ ಕೆಲಸ ಮಾಡಿದ ನಂತರ ಮೇಲಾಧಿಕಾರಿಗೆ ವಿಷಾದವಾಗಿದೆ. ಹಾಗಾಗಿ, ಬಾಸ್ ಕೊನೆಯಲ್ಲಿ ತನ್ನ ನಿಲುವನ್ನು ಬದಲಾಯಿಸಿ, work-from-home ಗೆ ಅನುಮತಿ ನೀಡಿದ್ದಾರೆ.
ರೆಡ್ಡಿಟ್ನ Malicious Compliance ವೇದಿಕೆಯಲ್ಲಿ ಕಥೆಯನ್ನು ಬಳಕೆದಾರರೊಬ್ಬರು ಅನಾಮಧೇಯವಾಗಿ ಹಂಚಿಕೊಂಡಿದ್ದು, ತಕ್ಷಣವೇ ಸಾವಿರಾರು ಬಳಕೆದಾರರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಆರೋಗ್ಯಕ್ಕೆ ಆದ್ಯತೆ ನೀಡದ ಸಂಘಟನೆಗಳು, ಕಠಿಣ ನೀತಿಗಳ ಮೂಲಕ ಮಾನವೀಯತೆಯನ್ನು ತ್ಯಜಿಸುತ್ತಿವೆ ಎಂಬ ವಿಷಯದ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ.
ಈ ಕಥೆಯು ಆನ್ಲೈನ್ನಲ್ಲಿ ಸಾಕಷ್ಟು ಚರ್ಚೆಗೆ ಒಳಪಡುತ್ತಿದೆ. ಉದ್ಯೋಗಿಗಳು ತಮ್ಮ ಯೋಗಕ್ಷೇಮ ಮತ್ತು ಉದ್ಯೋಗ ಭದ್ರತೆಯ ನಡುವೆ ಆಯ್ಕೆ ಮಾಡಿಕೊಳ್ಳಬೇಕಾದ ಒತ್ತಡವನ್ನು ಸೃಷ್ಟಿಸುವ ಕಾರ್ಪೊರೇಟ್ ಸಂಸ್ಕೃತಿಯ ಬಗ್ಗೆ ಅನೇಕ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಷಕಾರಿ ವರ್ತನೆಗಳನ್ನು ಪ್ರದರ್ಶಿಸುವ ಮಾನವೀಯತೆಗಿಂತ ಹೆಚ್ಚಾಗಿ ಉತ್ಪಾದಕೆಗೆ ಮಹತ್ವ ನೀಡುವ ಕಂಪನಿಗಳ ಬಗ್ಗೆ ಖಂಡಿಸಿ ಸಾಕಷ್ಟು ಜನ ಕಮೆಂಟ್ ಮಾಡಿದ್ದಾರೆ.
ಅನಾರೋಗ್ಯದ ನಡುವೆಯು ಉದ್ಯೋಗಿಯನ್ನು ಕೆಲಸಕ್ಕೆ ಬರಬೇಕೆಂದು ಹೇಳುವ ಮೇಲಾಧಿಕಾರಿಗಳ ನಿರ್ಧಾರಗಳು ಎಷ್ಟು ಸಮಸ್ಯೆಯನ್ನುಂಟು ಮಾಡಬಲ್ಲದು ಎಂಬುದರ ಒಬ್ಬ ಬಳಕೆದಾರರೊಬ್ಬರು “ಅನಾರೋಗ್ಯ ಪೀಡಿತ ವ್ಯಕ್ತಿಯನ್ನು ಕೆಲಸದ ಸ್ಥಳಕ್ಕೆ ಬಲವಂತಪಡಿಸುವುದು ಡೊಮಿನೊ ಪರಿಣಾಮವನ್ನು ಸೃಷ್ಟಿಸುತ್ತದೆ – ಸಹೋದ್ಯೋಗಿಗಳಿಗೆ ಸೋಂಕು ತಗುಲಿಸುವುದು, ಪರಿಣಾಮವಾಗಿ, ಹೆಚ್ಚಿನ ಉದ್ಯೋಗಿಗಳ ಕೆಲಸದ ಸಾಮರ್ಥ್ಯ ಕುಗ್ಗಿ, ಕಂಪನಿಗೆ ಉಂಟಾಗುವ ನಷ್ಟ ಜಾಸ್ತಿಯಾಗುತ್ತದೆ” ಎಂದಿದ್ದಾರೆ.
ಮತ್ತೊಬ್ಬ ಬಳಕೆದಾರರು ಇದೇ ರೀತಿಯ ಆದರೆ, ಇನ್ನೂ ಹೆಚ್ಚು ನಾಟಕೀಯ ಕಥೆಯನ್ನು ಹಂಚಿಕೊಂಡಿದ್ದಾರೆ. ಅವರ ಸ್ನೇಹಿತರು ಹಾಜರಾತಿ ನಿಯಮವನ್ನು ಕಡ್ಡಾಯಗೊಳಿಸಿದ ಬಾಸ್ ಅಡಿಯಲ್ಲಿ ಕೆಲಸ ಮಾಡುತ್ತಿದ್ದರಂತೆ.
ಇವರಿಗೆ ಒಮ್ಮೆ ಆರೋಗ್ಯ ಸಮಸ್ಯೆ ಉಂಟಾದಾಗ “ಅನಾರೋಗ್ಯವಿದ್ದರೂ ತೊಂದರೆ ಇಲ್ಲ, ನೀವೇನೂ ಆಸ್ಪತ್ರೆಗೆ ದಾಖಲಾಗುವ ಪರಿಸ್ಥಿತಿಯಲ್ಲಿ ಇಲ್ಲ ತಾನೇ”, ಎಂದು ಹೇಳಿ ಬಲವಂತವಾಗಿ ಕಛೇರಿಗೆ ಹಾಜರಾಗಲು ಹೇಳಿದ್ದಾರೆ. ಉದ್ಯೋಗಿಗೆ ಗಂಟಲು ನೋವು ಮತ್ತು ಬ್ರಾಂಕೈಟಿಸ್ ಎರಡೂ ಸಮಸ್ಯೆ ಇದ್ದರೂ ಕಚೇರಿಗೆ ಬರಲೇಬೇಕಾದ ಪರಿಸ್ಥಿತಿ ಉಂಟಾಗಿದೆ.
ಕಚೇರಿಗೆ ಬಂದ ನಂತರ ಉದ್ಯೋಗಿ ಆಕೆ ಕೆಲಸದ ನಿಮಿತ್ತ ಪದೇ ಪದೇ ಮೇಲಾಧಿಕಾರಿಯ ಕೊಠಡಿಗೆ ಹೋಗುವಂತಾಗಿದೆ. ಪ್ರಾಜೆಕ್ಟ್ ಒಂದರ ಕಾರಣವಾಗಿ ಇಬ್ಬರೂ ದೀರ್ಘಕಾಲದವರೆಗೆ ಅಕ್ಕಪಕ್ಕದಲ್ಲಿ ಕುಳಿತು ನಿಕಟವಾಗಿ ಕೆಲಸ ಮಾಡಿದ್ದಾರೆ.
ಪರಿಣಾಮವಾಗಿ ಮೂರು ದಿನಗಳಲ್ಲಿ, ಉದ್ಯೋಗದಾತ ಸ್ವತಃ ಅನಾರೋಗ್ಯಕ್ಕೆ ಒಳಗಾಗಿದ್ದು ಮಾತ್ರವಲ್ಲದೆ, ಕಾಯಿಲೆಯು ಅವರ ಮಕ್ಕಳು ಮತ್ತು ಸಂಗಾತಿಗೂ ಹಬ್ಬಿದೆ. ಮಕ್ಕಳಲ್ಲಿ ಒಬ್ಬರನ್ನು ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೂ ದಾಖಲಿಸಬೇಕಾಯಿತಂತೆ.
ಈ ಘಟನೆಯ ನಂತರ ಮೇಲಾಧಿಕಾರಿಗೆ ತನ್ನ ತಪ್ಪಿನ ಅರಿವಾಗಿ ಯಾರಿಗಾದರೂ ರೋಗಲಕ್ಷಣಗಳಿದ್ದರೆ ಅವರನ್ನು ಮನೆಯಿಂದಲೇ ಕೆಲಸ ಮಾಡಲು ಹೇಳಲಾಯಿತಂತೆ.
ಉದ್ಯೋಗಿಗಳ ಕ್ಷೇಮವನ್ನು ನಿರ್ಲಕ್ಷಿಸುವ ಕಠಿಣ ನೀತಿಗಳು ಕೇವಲ ಆರೋಗ್ಯದ ಅಪಾಯವನ್ನು ಉಂಟುಮಾಡುವುದಿಲ್ಲ, ಬದಲಾಗಿ ಅವು ಸಂಸ್ಥೆಯ ಕಾರ್ಯಕ್ಷಮತೆ ಮತ್ತು ನಂಬಿಕೆಗೆ ದೀರ್ಘಕಾಲಿಕ ಹಾನಿಯನ್ನುಂಟುಮಾಡುತ್ತವೆ.
ಹಾಗಾಗಿ, ಉದ್ಯೋಗದಾತರು, ವಿಶೇಷವಾಗಿ ಅನಾರೋಗ್ಯದ ಸಂದರ್ಭಗಳಲ್ಲಿ ಮಾನವೀಯತೆಯಿಂದಿರಬೇಕಾದುದು ನೈತಿಕ ಮತ್ತು ವೃತ್ತಿಪರ ಜವಾಬ್ದಾರಿ ಎಂಬದನ್ನು ಈ ಎರಡು ಘಟನೆಗಳು ಅರ್ಥ ಮಾಡಿಸಿವೆ..
July 04, 2025 3:03 PM IST
