Last Updated:
ಹೊಸಕೋಟೆ ಸೊಣ್ಣಹಳ್ಳಿಪುರದ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಮೇ 18 ರಿಂದ 13 ದಿನ ಉಚಿತ ಉದ್ಯೋಗ ತರಬೇತಿ ಶಿಬಿರ, 18 ರಿಂದ 50 ವಯಸ್ಸಿನವರಿಗೆ ಅವಕಾಶ.
ಚಿಕ್ಕಮಗಳೂರು: ನೀವು ಹಳ್ಳಿ ಅಥವಾ ಪಟ್ಟಣದಲ್ಲಿದ್ದುಕೊಂಡು ಸೂಕ್ತ ಕೆಲಸ (Job) ಸಿಗದೇ ಬೇಸತ್ತಿದ್ದೀರಾ? ಮುಂದೇನು ಮಾಡುವುದು ಎಂಬ ಚಿಂತೆ ನಿಮ್ಮನ್ನು ಕಾಡುತ್ತಿದೆಯೇ? ಹಾಗಿದ್ದರೆ ತಕ್ಷಣ ಅಲರ್ಟ್ ಆಗಿ. ನಿಮ್ಮ ಜೀವನವನ್ನೇ ಬದಲಾಯಿಸಬಲ್ಲ ಇತಿಹಾಸದ ಅತ್ಯಂತ ದೊಡ್ಡ ಆಫರ್ (Offer) ಇಲ್ಲಿದೆ. ಹೌದು, ಮನೆಯಲ್ಲೇ ಕುಳಿತುಕೊಂಡು ಸಮಯ ವ್ಯರ್ಥ ಮಾಡುವ ಬದಲು, ಲಕ್ಷ ಲಕ್ಷ ಲಾಭ ತಂದುಕೊಡುವ ಉದ್ಯೋಗದ ತರಬೇತಿಯನ್ನು (Job Training) ಉಚಿತವಾಗಿ (Free) ಪಡೆಯಿರಿ.
ಕೇವಲ ಕುರಿ ಸಾಕಾಣಿಕೆ ಅಷ್ಟೇ ಅಲ್ಲ, ವೈಜ್ಞಾನಿಕವಾಗಿ ಹಸು, ಮೇಕೆ, ಹಂದಿ, ಕೋಳಿ ಸಾಕಾಣಿಕೆ, ತೋಟಗಾರಿಕೆ ಮತ್ತು ಸಾವಯವ ಗೊಬ್ಬರ ತಯಾರಿಕೆಯಂತಹ ಡಿಮ್ಯಾಂಡ್ ಇರೋ ಬಿಸಿನೆಸ್ ಐಡಿಯಾಗಳನ್ನು ಇಲ್ಲಿ ತಜ್ಞರು ಹೇಳಿಕೊಡುತ್ತಾರೆ. ಇಷ್ಟೇ ಅಲ್ಲ, ನೀವು ಟ್ರೈನಿಂಗ್ ಪಡೆಯುವ 13 ದಿನಗಳ ಕಾಲ ಊಟ ಮತ್ತು ವಸತಿ ಸಂಪೂರ್ಣ ಉಚಿತ. ತರಬೇತಿ ಮುಗಿದ ತಕ್ಷಣ ಕೇಂದ್ರ ಸರ್ಕಾರದಿಂದಲೇ ಅಧಿಕೃತ ಸರ್ಟಿಫಿಕೇಟ್ ಸಿಗಲಿದೆ. ಇದನ್ನು ಬಳಸಿ ನೀವು ಸುಲಭವಾಗಿ ಬ್ಯಾಂಕ್ ಲೋನ್ ಪಡೆದು ಸ್ವಂತ ಬುಸಿನೆಸ್ ಮಾಡಬಹುದು.
ಗ್ರಾಮೀಣ ಭಾಗದ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಮೊದಲ ಆದ್ಯತೆ ಇರಲಿದೆ. ಕನ್ನಡ ಓದಲು ಮತ್ತು ಬರೆಯಲು ಬಂದರೆ ಸಾಕು, ನೀವು ಬುಸಿನೆಸ್ ಮೊದಲ ಹೆಜ್ಜೆ ಇಡಬಹುದು.
ಮೇ 18 ರ ಬೆಳಿಗ್ಗೆ 10 ಗಂಟೆಗೆ ನಿಮ್ಮ ಮಾರ್ಕ್ಸ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಹಿಡಿದು ನೇರವಾಗಿ ಹೊಸಕೋಟೆಯ ಕೆನರಾ ಬ್ಯಾಂಕ್ ಸಂಸ್ಥೆಗೆ ಹಾಜರಾಗಿ. ಒಂದು ವೇಳೆ ಹೋಗಲು ಸಾಧ್ಯವಾಗದಿದ್ದರೆ, ತಕ್ಷಣ ಈ ನಂಬರ್ಗಳಿಗೆ (8970476050, 9591514154, 9686248369) ಕಾಲ್ ಮಾಡಿ ನಿಮ್ಮ ಹೆಸರನ್ನು ಬುಕ್ ಮಾಡಿಕೊಳ್ಳಿ.
Chikmagalur,Karnataka

