Last Updated:
ಈಗಿನ ಕಾಲದ ಉದ್ಯೋಗಿಗಳು ಎಂದ್ರೆ ಜನರೇಷನ್ ಝಡ್ ಉದ್ಯೋಗಿಗಳು ಪ್ರಮೋಷನ್ ಎಲ್ಲಾ ಬೇಡ ನಮಗೆ, ವರ್ಷದಿಂದ ವರ್ಷಕ್ಕೆ ಸಂಬಳ ಜಾಸ್ತಿಯಾದ್ರೆ ಸಾಕು ಅಂತ ಹೇಳುತ್ತಿದ್ದಾರೆ ನೋಡಿ.
ಈಗಿನ ಕೆಲಸಗಳು ಯಾವಾಗ ಇರುತ್ತವೋ, ಯಾವಾಗ ಹೋಗುತ್ತವೋ ಅನ್ನೋದು ಬಹುಶಃ ಯಾರಿಂದಲೂ ಸಹ ಒಂದು ಸಣ್ಣ ಉಹೆ ಸಹ ಮಾಡಲು ಆಗುವುದಿಲ್ಲ ನೋಡಿ. ಅಂತಹದರಲ್ಲಿ ಕೆಲಸದಲ್ಲಿ ಪ್ರಮೋಷನ್ ಸಿಗುವುದು ಮತ್ತು ವರ್ಷದಿಂದ ವರ್ಷಕ್ಕೆ ಸಂಬಳ ಹೆಚ್ಚಾಗುವುದನ್ನ ಯಾರು ತಾನೇ ಬೇಡ ಅಂತ ಹೇಳ್ತಾರೆ ನೋಡಿ.
ಆದರೆ ಈಗಿನ ಕಾಲದ ಉದ್ಯೋಗಿಗಳು ಎಂದರೆ ಜನರೇಷನ್ ಝಡ್ ಉದ್ಯೋಗಿಗಳು ಪ್ರಮೋಷನ್ ಎಲ್ಲಾ ಬೇಡ ನಮಗೆ, ವರ್ಷದಿಂದ ವರ್ಷಕ್ಕೆ ಸಂಬಳ ಜಾಸ್ತಿಯಾದರೆ ಸಾಕು ಅಂತ ಹೇಳುತ್ತಿದ್ದಾರೆ ನೋಡಿ.
ಅನಯಾ ಎಂಬ ಉದ್ಯೋಗಿಯು ತಮ್ಮ 25ನೇ ವಯಸ್ಸಿನಲ್ಲಿಯೇ ಟೀಂ ಲೀಡ್ ಆಗಿರುವ ಪ್ರಮೋಷನ್ ಇ-ಮೇಲ್ ನೋಡಿ ಹೆಚ್ಚು ಖುಷಿ ಪಡಲಿಲ್ವಂತೆ ನೋಡಿ. ಅದೇ ಅವರ ಪಕ್ಕದಲ್ಲಿಯೇ ಕೂತ ಅವರ ತಂದೆಗೆ ಮಗಳು ಬೇಗನೆ ವೃತ್ತಿಜೀವನದಲ್ಲಿ ಬಡ್ತಿ ಪಡೆದಿರೋದು ತುಂಬಾನೇ ಖುಷಿ ಕೊಟ್ಟಿತು. ಅನಯಾ ಅವರಿಗೆ ಪ್ರಮೋಷನ್ ಸಿಕ್ಕಿದ್ದು ನಿಜಕ್ಕೂ ಹೆಮ್ಮೆ ತಂದಿದೆ ಮತ್ತು ಅದು ವೃತ್ತಿಜೀವನದಲ್ಲಿ ದೊಡ್ಡ ಬೆಳವಣಿಗೆ, ಅಂತ ಸಹ ಅವರು ಹೇಳಿಕೊಂಡರು.
ಐಎಂಟಿ ಘಾಜಿಯಾಬಾದ್ನಿಂದ ಪದವೀಧರೆಯಾದ 23 ವರ್ಷದ ಅನಯಾ ಅವರು ತಮಗೆ ಸಿಕ್ಕಿರುವ ಪ್ರಮೋಷನ್ ಎಷ್ಟರ ಮಟ್ಟಿಗೆ ಒಳ್ಳೆಯದು ಅನ್ನೋ ಗೊಂದಲದಲ್ಲಿದ್ದಾರೆ. ಈ ಬಡ್ತಿ ಸಿಕ್ಕಿರುವುದು ಅವರಿಗೆ ಐದು ಜನರ ಕೆಲಸವನ್ನು ನೋಡುವ ಮತ್ತು ಪರಿಶೀಲಿಸುವ ಜವಾಬ್ದಾರಿ ನೀಡಿತು, ಆದರೆ ಅವರಿಗೆ ಸ್ವತಃ ಹೊಸ ವಿಷಯಗಳನ್ನು ಕಲಿಯುವುದಕ್ಕೆ ಮತ್ತು ತಮ್ಮ ಕೆಲಸದ ಜೊತೆ ಹೊಸ ಹೊಸ ಪ್ರಯತ್ನಗಳನ್ನ ಮಾಡೋದಕ್ಕೆ ಅಡ್ಡಿಯಾಗಬಹುದು ಎಂಬ ಆತಂಕ ಇದೆಯಂತೆ.
ಆಗ ಇದನ್ನೆಲ್ಲಾ ಕೇಳಿದ ಅವರ ತಂದೆಗೆ ಅವರ ಸಮಯದಲ್ಲಿ ಕೆಲಸದಲ್ಲಿ ಬಡ್ತಿ, ಸಂಬಳ ಹೆಚ್ಚಳ ಅಂತ ಹೇಳಿದರೆ ವೃತ್ತಿಜೀವನದಲ್ಲಿ ಸಿಕ್ಕಿರುವ ಗೌರವ ಅಂತ ಅಂದುಕೊಳ್ಳುತ್ತಿದ್ದರಂತೆ ಅಂತ ಹೇಳಿದರು.
ಇಂದು ಭಾರತದ ಉದ್ಯೋಗ ಮಾರುಕಟ್ಟೆಗೆ ಪ್ರವೇಶಿಸುವ ಅನೇಕ ಯುವ ವೃತ್ತಿಪರರಿಗೆ ವೃತ್ತಿಜೀವನದ ಬೆಳವಣಿಗೆಯು ಅಷ್ಟೊಂದು ಪ್ರೇರಣೆ ನೀಡುವ ವಿಷಯಗಳಾಗಿ ಉಳಿದಿಲ್ಲ. ಇದರ ಬದಲಾಗಿ ಅವರು ಸ್ವಯಂ ಅವರು ಕೆಲಸದಲ್ಲಿ ಬೆಳೆಯುವ ಆಯ್ಕೆಯನ್ನು ನೋಡುತ್ತಿದ್ದಾರೆ. ಪೀಳಿಗೆಯಿಂದ ಪೀಳಿಗೆಗೆ ಹುದ್ದೆಗಳ ಮತ್ತು ಅಧಿಕಾರದ ಬಡ್ತಿಯ ವ್ಯಾಖ್ಯಾನ ಎಲ್ಲವೂ ಬದಲಾಗುತ್ತಿರುತ್ತವೆ ಅಂತ ಹೇಳಬಹುದು.
2025 ರಲ್ಲಿ ನೌಕರಿ ಡಾಟ್ ಕಾಂ ನಡೆಸಿದ ಸಮೀಕ್ಷೆಯು, ಕೈಗಾರಿಕೆಗಳಾದ್ಯಂತ 23,000ಕ್ಕೂ ಹೆಚ್ಚು ಜೆನ್ ಝಡ್ ವೃತ್ತಿಪರರನ್ನು ಸಮೀಕ್ಷೆ ಮಾಡಿತು, 57% ಜನರು ವೃತ್ತಿಜೀವನದ ಬೆಳವಣಿಗೆಯನ್ನು ಪ್ರಾಥಮಿಕವಾಗಿ ಹೊಸ ಕೌಶಲ್ಯಗಳನ್ನು ಕಲಿಯುವುದು ಎಂದು ವ್ಯಾಖ್ಯಾನಿಸುತ್ತಾರೆ ಎಂದು ಕಂಡು ಹಿಡಿದಿದೆ. ಬಡ್ತಿಗಳು ಮತ್ತು ಹುದ್ದೆಗಳ ಶೀರ್ಷಿಕೆ ಬದಲಾವಣೆಗಳು ಗಮನಾರ್ಹವಾಗಿ ಕಡಿಮೆ ಸ್ಥಾನ ಪಡೆದಿವೆ.
ಡೆಲಾಯ್ಟ್ ಗ್ಲೋಬಲ್ ಜೆನ್ ಝಡ್ ಮತ್ತು ಮಿಲೇನಿಯಲ್ ಸಮೀಕ್ಷೆಯು ಇದೇ ರೀತಿ ಕಲಿಯಲು ಮತ್ತು ಅಭಿವೃದ್ಧಿಪಡಿಸಲು ಅವಕಾಶಗಳು ವಿಶ್ವಾದ್ಯಂತ ಯುವ ಕಾರ್ಮಿಕರಿಗೆ ಉನ್ನತ ವೃತ್ತಿ ಆದ್ಯತೆಗಳಲ್ಲಿ ಸ್ಥಿರವಾಗಿ ಸ್ಥಾನ ಪಡೆದಿವೆ ಎಂದು ಕಂಡು ಹಿಡಿದಿದೆ.
ಮುಂಬೈ ಮೂಲದ ಬಹುರಾಷ್ಟ್ರೀಯ ಕಂಪನಿಯ ಹಿರಿಯ ಮಾನವ ಸಂಪನ್ಮೂಲ ನಾಯಕ ಆಶಿಶ್ ಧವನ್, ಮೌಲ್ಯಮಾಪನ ಸಂಭಾಷಣೆಗಳಲ್ಲಿ ಈ ಬದಲಾವಣೆಯು ಗೋಚರಿಸುತ್ತದೆ ಎಂದು ಹೇಳುತ್ತಾರೆ. ‘ಮೊದಲು, ಉದ್ಯೋಗಿಗಳು ಬಡ್ತಿಗಾಗಿ ಪದೇ ಪದೇ ಕೇಳುತ್ತಿದ್ದರು. ಈಗ ಅವರು ಯಾವ ಹೊಸ ಕೌಶಲ್ಯಗಳನ್ನು ಕಲಿತುಕೊಳ್ಳುತ್ತಾರೆ ಎಂಬುದರ ಬಗ್ಗೆ ಹೆಚ್ಚು ಕೇಳುತ್ತಾರೆ,’ ಅಂತ ಆಶಿಶ್ ಅವರು ಹೇಳುತ್ತಾರೆ.
ಬೆಂಗಳೂರಿನ 26 ವರ್ಷದ ಸಾಫ್ಟ್ವೇರ್ ಡೆವಲಪರ್ ಪ್ರಶಾಂತ್ ಮೌರ್ಯ ಈ ಬದಲಾವಣೆಯನ್ನು ‘ನಾನು ತುಂಬಾ ಬೇಗನೆ ಮ್ಯಾನೇಜರ್ ಆದೆ, ನಾನು ದಿನದ ಹೆಚ್ಚಿನ ಸಮಯ ಮೀಟಿಂಗ್ಗಳಲ್ಲಿಯೇ ಸಮಯ ಕಳೆಯುತ್ತೇನೆ. ತಂತ್ರಜ್ಞಾನವು ತುಂಬಾ ವೇಗವಾಗಿ ವಿಕಸನಗೊಳ್ಳುತ್ತದೆ. ನಾನು ಮ್ಯಾನೇಜರ್ ಆದ ನಂತರ ಹೊಸ ವಿಷಯ ಕಲಿತಿರುವುದು ತುಂಬಾನೇ ಕಡಿಮೆ,’ ಅಂತ ವಿವರಿಸಿದ್ದಾರೆ.

