Advertisement
Advertisement

2nd PUC Result: ಬಳ್ಳಾರಿ ಜೈಲಿನ ಗೋಡೆಗಳ ನಡುವೆ ಅರಳಿದ ಪ್ರತಿಭೆ; ಜೀವಾವಧಿ ಶಿಕ್ಷೆಯ ನಡುವೆಯೂ ಪಿಯುಸಿಯಲ್ಲಿ ಪಡೆದ ಅಂಕ ನೋಡಿದ್ರೆ ದಂಗಾಗ್ತೀರಾ

Bhimasi 01 71 2026 04 35644474ee211d81c0c108623b6ebc59 1200x675.jpg


Last Updated:

Bellary Central Jail prisoner PUC exam: ಜೀವಾವಧಿ ಶಿಕ್ಷೆ ಎನ್ನುವುದು ಯಾರಿಗಾದರೂ ಜೀವನದ ಅಂತ್ಯದಂತೆ ಕಾಣಿಸುತ್ತದೆ. ಆದರೆ ಆ ಕೈದಿ ಪಾಲಿಗೆ ಅದು ಆತ್ಮಾವಲೋಕನದ ಮತ್ತು ಹೊಸ ಆರಂಭದ ಹಾದಿಯಾಯಿತು ಎನ್ನುವುದಕ್ಕೆ ಅವನ ಫಲಿತಾಂಶವೇ ಸಾಕ್ಷಿಯಾಗಿದೆ. ತನ್ನ ಹಳೆಯ ತಪ್ಪುಗಳಿಗೆ ಪಶ್ಚಾತಾಪ ಪಡುತ್ತಾ ಕೂರುವ ಬದಲು, ಅಕ್ಷರಗಳ ಜತೆ ಸ್ನೇಹ ಬೆಳೆಸಿ ಈ ಸಾಧನೆ ಮಾಡಿದ್ದಾನೆ.

ಸಾಂಕೇತಿಕ ಚಿತ್ರ!
ಸಾಂಕೇತಿಕ ಚಿತ್ರ!

ಬಳ್ಳಾರಿ ಕೇಂದ್ರ ಕಾರಾಗೃಹದ (Bellary Central Jail) ಆ ನಾಲ್ಕು ಗೋಡೆಗಳ ನಡುವೆ ಹರಿಯುತ್ತಿದ್ದದ್ದು ಕೇವಲ ಪಶ್ಚಾತಾಪದ ಕಣ್ಣೀರು ಮಾತ್ರವಲ್ಲ, ಅಲ್ಲಿ ಜ್ಞಾನದ ಹಸಿವು ಕೂಡ ಇತ್ತು ಎನ್ನುವುದಕ್ಕೆ ಈ ಘಟನೆಗೆ ಸಾಕ್ಷಿ. ಕೊಲೆ ಪ್ರಕರಣಕ್ಕೆ(Murder Case) ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆ(Life Sentence) ಅನುಭವಿಸುತ್ತಿರುವ ಕೈದಿಯೊಬ್ಬ ಪಿಯುಸಿ ಪರೀಕ್ಷೆಯಲ್ಲಿ(PUC Exam) ಶೇ.80 ರಷ್ಟು ಅಂಕ ಪಡೆಯುವ ಮೂಲಕ ಸಮಾಜಕ್ಕೆ ಹೊಸ ಸಂದೇಶ ನೀಡಿದ್ದಾರೆ. ಈ ಸಾಧನೆ ಹಿಂದೆ ಇರುವ ಭಾವನಾತ್ಮಕ ಕಥೆ ಇಲ್ಲಿದೆ.

ಕತ್ತಲ ಕೋಣೆಯಲ್ಲಿ ಕಂಡ ಜ್ಞಾನದ ಬೆಳಕು!

ಜೀವಾವಧಿ ಶಿಕ್ಷೆ ಎನ್ನುವುದು ಯಾರಿಗಾದರೂ ಜೀವನದ ಅಂತ್ಯದಂತೆ ಕಾಣಿಸುತ್ತದೆ. ಆದರೆ ಆ ಕೈದಿ ಪಾಲಿಗೆ ಅದು ಆತ್ಮಾವಲೋಕನದ ಮತ್ತು ಹೊಸ ಆರಂಭದ ಹಾದಿಯಾಯಿತು ಎನ್ನುವುದಕ್ಕೆ ಅವನ ಫಲಿತಾಂಶವೇ ಸಾಕ್ಷಿಯಾಗಿದೆ. ತನ್ನ ಹಳೆಯ ತಪ್ಪುಗಳಿಗೆ ಪಶ್ಚಾತಾಪ ಪಡುತ್ತಾ ಕೂರುವ ಬದಲು, ಅಕ್ಷರಗಳ ಜತೆ ಸ್ನೇಹ ಬೆಳೆಸಿ ಈ ಸಾಧನೆ ಮಾಡಿದ್ದಾನೆ. ಬಳ್ಳಾರಿ ಕೇಂದ್ರ ಕಾರಾಗೃಹ ಕತ್ತಲ ಕೋಣೆಯಲ್ಲಿ ಕುಳಿತು ಅವರು ಪುಸ್ತಕಗಳನ್ನು ಹಿಡಿದಾಗ, ಅವರಿಗೆ ಕಂಡಿದ್ದು ಕೇವಲ ಅಕ್ಷರಗಳಲ್ಲ, ಬದಲಿಗೆ ಒಂದು ಗೌರವಯುತ ಭವಿಷ್ಯದ ಕನಸು ಎಂಬುದು ಆ ಕೈದಿಯ ಸಾಧನೆಯನ್ನು ಸಾಕ್ಷೀಕರಿಸುತ್ತದೆ.

ಪೊಲೀಸ್​ ಕಾವಲಿನಲ್ಲಿ ಪರೀಕ್ಷೆ, ಮನಸ್ಸಿನಲ್ಲಿ ಗೆಲುವಿನ ಛಲ!

ಪರೀಕ್ಷಾ ಕೇಂದ್ರಕ್ಕೆ ಈ ಬಾಲ ಕೈದಿ ಬಂದಿದ್ದು ಸಾಮಾನ್ಯ ವಿದ್ಯಾರ್ಥಿಯಂತಲ್ಲ. ಅವನ ಕೈಗೆ ಬೇಡಿ ಇಲ್ಲದಿರಬಹುದು, ಆದರೆ ಸುತ್ತಲೂ ಪೊಲೀಸ್​ ಬೆಂಗಾವಲೇ ಇತ್ತು. ಒಬ್ಬ ಕೈದಿಯಾಗಿ ಸಮಾಜದ ಕಣ್ಣುಗಳು ಮುಂದೆ ಪರೀಕ್ಷೆ ಬರೆಯುವುದು ಅಷ್ಟು ಸುಲಭವಾಗಿರಲಿಲ್ಲ. ಜನರ ನೋಟ, ಹಳೆಯ ನೆನಪು ಕಾಡುತ್ತಿದ್ದರೂ, ಅಶೋಕ್ ಅವರ ಏಕಾಗ್ರತೆ ಮಾತ್ರ ಕೇವಲ ಉತ್ತರ ಪತ್ರಿಕೆ ಮೇಲಿತ್ತು ಎಂದು ಕಾಣಿಸುತ್ತದೆ. ಏಕೆಂದರೆ ಶಿಕ್ಷೆಯ ಗೋಡೆಗಳು ಅವರ ಜ್ಞಾನದ ಹಸಿವನ್ನು ನೀಗಿಸಿದ್ದವು. ಅದಕ್ಕೆ ಈ ಹುಡುಗನ ಅಂಕಗಳೇ ಸಾಕ್ಷಿ.

ಮಾನವೀಯತೆಯ ವಿಜಯ!

ಈ ಯುವ ಕೈದಿಯ ಸಾಧನೆಯಲ್ಲಿ ಜೈಲು ಅಧಿಕಾರಿಗಳ ಪ್ರೋತ್ಸಾಹವೂ ದೊಡ್ಡದು. ಒಬ್ಬ ವ್ಯಕ್ತಿ ತಪ್ಪು ಮಾಡಿದಾಗ ಸಮಾಜ ಅವನನ್ನು ದೂರ ತಳ್ಳುತ್ತದೆ. ಆದರೆ ಜೈಲಿನ ಈ ವಾತಾವರಣ ಅವನನ್ನು ತಿದ್ದಿ ತೀಡಿ ಒಬ್ಬ ವಿದ್ಯಾರ್ಥಿಯಾಗಿ ರೂಪಿಸಿದ್ದು ಮಾನವೀಯತೆಯ ದೊಡ್ಡ ಗೆಲುವು ಎನ್ನಬಹುದು. ಮನುಷ್ಯ ತಪ್ಪು ಮಾಡುತ್ತಾನೆ, ಆದರೆ ಆ ತಪ್ಪನ್ನೇ ಜೀವನವಾಗಿಸಿಕೊಳ್ಳಬಾರದು ಎಂಬ ಮಾತನ್ನು ಅಶೋಕ್ ಇಂದು ಸಾಬೀತುಪಡಿಸಿದ್ದಾರೆ.

ಭರವಸೆ ಬೆಳಕು!

ಈ ಫಲಿತಾಂಶ ಕೇವಲ ಅಂಕಗಳ ಪಟ್ಟಿಯಲ್ಲ, ಇದು ಅಶೋಕ್​ ಅವರ ಪರಿವರ್ತನೆಯ ಪ್ರಮಾಣಪತ್ರವಾಗಿದೆ. ಜೈಲಿನ  ಕಠಿಣ ನಿಯಮ, ಜೈಲು ಕಂಬಿಗಳ ನಡುವೆ ಒಬ್ಬ ಮನುಷ್ಯ ತನ್ನ ವ್ಯಕ್ತಿತ್ವವನ್ನು ಹೇಗೆ ಬದಲಿಸಿಕೊಳ್ಳಬಹುದು ಎಂಬುದಕ್ಕೆ ಇದು ಅದ್ಭುತ ಉದಾಹರಣೆಯಾಗಿದೆ. ಈ ಯುವ ಕೈದಿಯ ಸಾಧನೆ, ಜೀವನದಲ್ಲಿ ಸೋತು ದಾರಿ ತಪ್ಪಿದ ಸಾವಿರಾರು ಮಂದಿಗೆ, ಇನ್ನೂ ಕಾಲ ಮಿಂಚಿಲ್ಲ, ಸಾಧಿಸಲು ಮನಸ್ಸಿದ್ದರೆ ಜೈಲಿನ ಗೋಡೆಗಳು ಅಡ್ಡಿಯಾಗಲಾರವು ಎಂಬ ಭರವಸೆಯನ್ನು ನೀಡಿದೆ.

ಕನ್ನಡ ಸುದ್ದಿ/ ನ್ಯೂಸ್/ಶಿಕ್ಷಣ/

2nd PUC Result: ಬಳ್ಳಾರಿ ಜೈಲಿನ ಗೋಡೆಗಳ ನಡುವೆ ಅರಳಿದ ಪ್ರತಿಭೆ; ಜೀವಾವಧಿ ಶಿಕ್ಷೆಯ ನಡುವೆಯೂ ಪಿಯುಸಿಯಲ್ಲಿ ಪಡೆದ ಅಂಕ ನೋಡಿದ್ರೆ ದಂಗಾಗ್ತೀರಾ



Source link

Leave a Reply

Your email address will not be published. Required fields are marked *

TOP