ಈ ವರ್ಷ ಸಹ ಇಂತಹದೇ ಸಾಲಿಗೆ ಸೇರುವಂತಹ ಒಂದು ಸ್ಪೂರ್ತಿ ನೀಡುವ ಕಥೆ ಇಲ್ಲಿದೆ ನೋಡಿ. ಜೀವನ ನಡೆಸುವುದಕ್ಕೆ ಪಾನಿಪುರಿ ಮಾರಾಟ ಮಾಡಿಕೊಂಡು ಬದುಕುತ್ತಿದ್ದವರ ಮಗ ಪರೀಕ್ಷೆ ತಯಾರಿ ನಡೆಸುವಾಗ ತೀವ್ರ ಅನಾರೋಗ್ಯ ಸಮಸ್ಯೆಯಿಂದ ಬಳಲಿ, ನಂತರ ಅದರಿಂದ ಚೇತರಿಸಿಕೊಂಡು ಐಐಟಿ ಅಂತಹ ಪರೀಕ್ಷೆಯನ್ನು ಪಾಸ್ ಮಾಡಿದ್ದಾರೆ.
ಪಾನಿಪುರಿ ಮಾರಿಕೊಂಡು ಜೀವನ ನಡೆಸುತ್ತಿದ್ದ 19 ವರ್ಷದ ಹರ್ಷ ಗುಪ್ತಾ ಅನಾರೋಗ್ಯ ಸಮಸ್ಯೆಯಿಂದ ಬಳಲಿ 11ನೇ ತರಗತಿಯ ಪರೀಕ್ಷೆಯಲ್ಲಿ ಫೇಲ್ ಆಗಿದ್ರಂತೆ. ಆದರೆ ಛಲ ಬಿಡದೆ ಮತ್ತೆ ಓದಿಕೊಂಡು ಐಐಟಿ ಅಂತಹ ಪರೀಕ್ಷೆಯನ್ನು ಒಳ್ಳೆಯ ಅಂಕಗಳನ್ನು ಪಡೆಯುವುದರೊಂದಿಗೆ ಪಾಸ್ ಮಾಡಿ, ಈಗ ರೂರ್ಕಿಯ ಐಐಟಿ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದಾರೆ.
ಹರ್ಷನ ಪೋಷಕರಾದ ಸಂತೋಷ್ ಮತ್ತು ರೀತಾ ತಮ್ಮ ಜೀವನೋಪಾಯಕ್ಕಾಗಿ ಪಾನಿಪುರಿ ಮಾರುತ್ತಾರಂತೆ, ಹರ್ಷ ಸಹ ತನ್ನ ಪೋಷಕರಿಗೆ ಸಹಾಯ ಮಾಡುತ್ತಿದ್ದರಂತೆ. ತೀವ್ರ ಆರೋಗ್ಯ ಸಮಸ್ಯೆಗಳು, ಆರ್ಥಿಕ ಸಂಕಷ್ಟಗಳು ಮತ್ತು ವೈಫಲ್ಯ ಮತ್ತು ನಿರಾಕರಣೆಯ ಭಯವನ್ನ ಎದುರಿಸಿ ಇಂತಹ ಒಂದು ಪರೀಕ್ಷೆಯಲ್ಲಿ ಒಳ್ಳೆಯ ರ್ಯಾಂಕ್ ಪಡೆದಿದ್ದಾರೆ ನೋಡಿ ಈ ಪೋರ.
ಹರ್ಷ ಇಂತಹ ಒಂದು ಸಾಧನೆ ಮಾಡುವ ಮೂಲಕ ತನ್ನ ಕಿರಿಯ ಸಹೋದರರಾದ ಶಿವಮ್ ಮತ್ತು ಶುಭಮ್ಗೆ ಒಂದು ಉಜ್ವಲ ಉದಾಹರಣೆಯಾಗಿ ಹೊರಹೊಮ್ಮಿದ್ದಾರೆ ಅಂತ ಹೇಳಬಹುದು.
‘ನಾನು ಮಹಾರಾಷ್ಟ್ರ ರಾಜ್ಯದ ಥಾಣೆ ಜಿಲ್ಲೆಯಲ್ಲಿರುವ ಚಿಂಚ್ಪಾಡದಲ್ಲಿ ಬೆಳೆದೆ, ನನ್ನ ಹೆತ್ತವರು ಪಾನಿಪುರಿ ಅಂಗಡಿಯನ್ನು ನಡೆಸುತ್ತಾರೆ. ವ್ಯವಹಾರ ಉತ್ತಮವಾಗಿದ್ದಾಗ, ಅವರು ದಿನಕ್ಕೆ 600 ರಿಂದ 1,000 ರೂಪಾಯಿಗಳವರೆಗೆ ಗಳಿಸುತ್ತಾರೆ,’ ಅಂತ ವಿದ್ಯಾರ್ಥಿ ಹರ್ಷ ಗುಪ್ತಾ ಹೇಳುತ್ತಾರೆ.
‘ಅನೇಕ ಸವಾಲುಗಳ ಹೊರತಾಗಿಯೂ, ನನ್ನ ತಂದೆ ತಮ್ಮ ಮಕ್ಕಳು ಇಂಗ್ಲಿಷ್-ಮಾಧ್ಯಮ ಶಾಲೆಯಲ್ಲಿಯೇ ಓದಬೇಕು ಅನ್ನೋ ಒಂದು ದೃಢನಿಶ್ಚಯವನ್ನು ಹೊಂದಿದ್ದರು,’ ಅಂತ ಹರ್ಷ ಅವರು ಹೇಳುತ್ತಾರೆ. ‘ನಾನು ಸಹ ಅದೇ ರೀತಿಯಾಗಿ ಇಂಡಿಯನ್ ಕಲ್ಚರಲ್ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಓದಿದ್ದೇನೆ. ನನ್ನ ಒಂಬತ್ತನೇ ಮತ್ತು ಹತ್ತನೇ ತರಗತಿಗಳಲ್ಲಿ ನಾನು ಟ್ಯೂಷನ್ ತರಗತಿಗಳಿಗೆ ಹಾಜರಾಗಿದ್ದೆ ಮತ್ತು ನನ್ನ ಎಸ್ಎಸ್ಸಿ ಬೋರ್ಡ್ ಪರೀಕ್ಷೆಯಲ್ಲಿ ಶೇಕಡಾ 90.8 ಅಂಕಗಳನ್ನು ಗಳಿಸಿದೆ.
ನಾನು 11ನೇ ತರಗತಿಗೆ ಕಲ್ಯಾಣ್ನಲ್ಲಿರುವ ಮಾಡೆಲ್ ಕಾಲೇಜಿಗೆ ಸೇರಿದೆ. ಕೋರ್ಸ್ನ ಕೆಲವು ತಿಂಗಳುಗಳ ನಂತರ, ನಾನು ಗುದನಾಳ ಸಂಬಂಧಿತ ಕಾಯಿಲೆಯಿಂದ ಬಳಲಿದೆ,’ ಅಂತ ಹರ್ಷ ಹೇಳಿದರು. ‘ಆ ವರ್ಷ, ನನ್ನ ಇಬ್ಬರು ಚಿಕ್ಕಮ್ಮಂದಿರು ಸಹ ನಿಧನರಾದರು, ಇದು ನಮ್ಮ ಖರ್ಚು ಮತ್ತು ಆರ್ಥಿಕ ಒತ್ತಡವನ್ನು ಮತ್ತಷ್ಟು ಹೆಚ್ಚಿಸಿತು, ನನ್ನ ಕಿರಿಯ ಸಹೋದರರು ಶಾಲೆಯಲ್ಲಿದ್ದರು ಮತ್ತು ಸ್ಥಿರ ಆದಾಯವಿಲ್ಲದ ಅವಧಿ ಅದಾಗಿತ್ತು,’ ಅಂತ ಹರ್ಷ ಆ ಕಠಿಣ ದಿನಗಳನ್ನು ನೆನಪಿಸಿಕೊಂಡರು.
‘ಆರೋಗ್ಯ ಸಮಸ್ಯೆಯಿಂದ ಮತ್ತು ಇನ್ನಿತರೆ ಸಮಸ್ಯೆಗಳಿಂದಾಗಿ ಕೆಲವು ವಿಷಯಗಳ ಪರೀಕ್ಷೆಯನ್ನು ತಪ್ಪಿಸಿಕೊಂಡ್ರಂತೆ ಮತ್ತು 11ನೇ ತರಗತಿಯಲ್ಲಿ ಅನುತ್ತೀರ್ಣನಾದೆ. ನನ್ನ ಕೆಲವು ಬ್ಯಾಚ್ಮೇಟ್ಗಳು ನನಗೆ ಐಐಟಿ-ಜೆಇಇ ಪಾಸ್ ಮಾಡುವ ಸಾಮರ್ಥ್ಯವಿಲ್ಲ ಅಂತ ಸಹ ಮಾತಾಡಿದರು,’ ಅಂತ ಹರ್ಷ ಹೇಳಿಕೊಂಡರು.
‘ಕೋವಿಡ್ ಸಮಯದಲ್ಲಿ ನಾನು ನಿತಿನ್ ವಿಜಯ್, ಮೋಷನ್ ಎಜ್ಯುಕೇಶನ್ನ ಸಂಸ್ಥಾಪಕ, ಕೋಟಾ, ಅವರ ಬಗ್ಗೆ ಇನ್ಸ್ಟಾಗ್ರಾಮ್ ರೀಲ್ ಅನ್ನು ನೋಡಿದೆ. ಅದು ನನ್ನ ಜೆಇಇ ಕನಸನ್ನು ಮುಂದುವರಿಸಲು ನನಗೆ ಸ್ಫೂರ್ತಿ ನೀಡಿತು. ನಾನು ಕೋಟಾಗೆ ಹೋಗಬೇಕೆಂದು ನನ್ನ ಪೋಷಕರಿಗೆ ಹೇಳಿದೆ. ಅವರು ನನ್ನ ನಿರ್ಧಾರವನ್ನು ಬೆಂಬಲಿಸಿದರು,’ ಅಂತ ಹರ್ಷ ಹೇಳಿದರು.
‘ನನ್ನ 12ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ನಾನು ಶೇಕಡಾ 85.8 ಅಂಕಗಳನ್ನು ಗಳಿಸಿದ್ದರಿಂದ, ನನ್ನ ಕೋಚಿಂಗ್ ತರಗತಿಯ ಮೋಷನ್ – ಅವರ ಶುಲ್ಕವನ್ನು ಸರಿದೂಗಿಸುವ ವಿದ್ಯಾರ್ಥಿವೇತನವನ್ನು ನೀಡಿತು. ನಾನು ಮತ್ತೆ ಪರೀಕ್ಷೆ ಬರೆದೆ ಮತ್ತು ಜೆಇಇ ಮೇನ್ಸ್ 2025 ಪರೀಕ್ಷೆಯಲ್ಲಿ 98.94 ಪ್ರತಿಶತವನ್ನು ಗಳಿಸಿದೆ,’ ಅಂತ ವಿದ್ಯಾರ್ಥಿ ಹೇಳಿಕೊಂಡರು.
July 09, 2025 3:52 PM IST
